ತ್ವರಿತ ಅಲರ್ಟ್ ಗಳಿಗಾಗಿ
For Daily Alerts
50ಸಾವಿರ ಭಕ್ತ ಜನತೆಯಿಂದ ಸೌಂದರ್ಯ ಲಹರಿ ಪಠಣೆ
ಬೆಂಗಳೂರು : ನಗರದ ಅರಮನೆ ಮೈದಾನದಲ್ಲಿ ಭಕ್ತಿ ಪುಳಕ. ಭಾನುವಾರ ಸಂಜೆ 50 ಸಾವಿರಕ್ಕೂ ಅಧಿಕ ಮಂದಿ ಭಕ್ತಿ ಪರವಶರಾಗಿ ಏಕಕಾಲದಲ್ಲಿ , ಶಂಕರ ಭಗವತ್ಪಾದರ ಸೌಂದರ್ಯ ಲಹರಿ ಪಠಿಸಿದರು.
ಶಂಕರ ಯಶೋವೈಭವಂ ಕಾರ್ಯಕ್ರಮದಲ್ಲಿ ಸ್ತೋತ್ರ ಪಠಣೆ ನಡೆಯಿತು. 100 ಶ್ಲೋಕಗಳನ್ನು ಸುಶ್ರಾವ್ಯವಾಗಿ ಹಾಡಲಾಯಿತು. ದೇಶದ ಮೂಲೆಮೂಲೆಗಳಿಂದ ಕಾರ್ಯಕ್ರಮಕ್ಕಾಗಿ ಅನೇಕ ಸ್ವಾಮೀಜಿಗಳು, ಪಂಡಿತರು, ವೇದಾಂತಿಗಳು ಆಗಮಿಸಿದ್ದರು.
ಸಮಾರಂಭದಲ್ಲಿ ಮಾತನಾಡಿದ ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿ, ಸೌಂದರ್ಯ ಲಹರಿ ಪಠಿಸುವುದರಿಂದ ಎಲ್ಲಾ ಕಷ್ಟಗಳು ದೂರವಾಗುತ್ತವೆ. ಜ್ಞಾನದ ಬೆಳಕು ಕಾಣಿಸುತ್ತದೆ. ವಿಶ್ವಮಾತೆಯ ಭಜಿಸುವ ಈ ಲಹರಿಯನ್ನು ಶಂಕರಾಚಾರ್ಯರು ರಚಿಸಿದ್ದಾರೆ ಎಂದು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, May 21, 2007, 5:30 [IST]