ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರ್ಕಾರಿ ನೌಕರರ ಆಸೆ-ಕನಸು ಫಲಿಸುವುದೇ???

By Staff
|
Google Oneindia Kannada News

ಬೆಂಗಳೂರು : ಐದನೇ ವೇತನ ಆಯೋಗದ ವರದಿಯನ್ನು ಸರ್ಕಾರ ಅನುಷ್ಠಾನಗೊಳಿಸಿದರೇ, ರಾಜ್ಯ ಸರ್ಕಾರಿ ನೌಕರರು ಸಂತಸದ ಕಡಲಲ್ಲಿ ಈಜಲಿದ್ದಾರೆ.

ಆಯೋಗದ ಅಧ್ಯಕ್ಷ ಎಂ.ಬಿ.ಪ್ರಕಾಶ್‌, ಅಂತಿಮ ವರದಿಯನ್ನು ಸಿದ್ಧಪಡಿಸಿದ್ದು, ಮಂಗಳವಾರ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಈ ವಿಷಯವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಸಮಾರಂಭದಲ್ಲಿ , ಸನ್ಮಾನ ಸ್ವೀಕರಿಸಿದ ನಂತರ ಎಂ.ಬಿ.ಪ್ರಕಾಶ್‌ ಖಚಿತಪಡಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ವರದಿ ಜಾರಿಗೆ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಹೀಗಾದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆನ್ನುತ್ತಾರೆ ಸರ್ಕಾರಿ ನೌಕರರು! ನೋಡೋಣ.

ವರದಿಯಲ್ಲಿ ಇದೆ ಎನ್ನಲಾದ ಅಂಶಗಳು :

  • ಪ್ರಾಥಮಿಕ ಶಾಲಾ ಶಿಕ್ಷಕರ ಮೂಲ ವೇತನ ಹೆಚ್ಚಳ.
  • ಸರ್ಕಾರಿ ನೌಕರರಿಗೆ ಉಚಿತ ವೈದ್ಯಕೀಯ ಸೇವೆ.
  • ನೌಕರರಿಗೆ ಸುಲಭ ಸಾಲ ಸೌಲಭ್ಯ.
(ದಟ್ಸ್‌ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X