ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಡಿಯೋ ಮಾರುಕಟ್ಟೆಯಲ್ಲಿ ಕವಿ ನಿಸಾರ್‘ಮಿಲನೋತ್ಸವ’
ಬೆಂಗಳೂರು : ನಿಸಾರ್ ಪ್ರಿಯರಿಗೆ ಖುಷಿ ಸಮಾಚಾರ. ‘ಮಿಲನೋತ್ಸವ’ ಈಗ ಮಾರುಕಟ್ಟೆಯಲ್ಲಿದೆ!
ನಿತ್ಯೋತ್ಸವದ ಕವಿ ಕೆ.ಎಸ್. ನಿಸಾರ್ ಅಹಮದ್ರ ಭಾವಗೀತೆಗಳನ್ನು ಆಯ್ದು , ಅರುಣ್ ಆ್ಯಂಡ್ರಂ ಮತ್ತು ಹಿನ್ನೆಲೆ ಗಾಯಕಿ ಡಾ.ಶಮಿತಾ ಮಲ್ನಾಡು ಸಂಗೀತ ಸಂಯೋಜಿಸಿ, ಧ್ವನಿ ಸುರುಳಿಯನ್ನು ಸಿದ್ಧಪಡಿಸಿದ್ದಾರೆ.
ನಯನ ಸಭಾಂಗಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ, ಧ್ವನಿ ಸುರಳಿ ಮತ್ತು ಸೀಡಿಗಳನ್ನು ಬಿಡುಗಡೆ ಮಾಡಿದರು. ತಮ್ಮ ಕವನಗಳ 10ನೇ ಧ್ವನಿ ಸುರಳಿ ಬಿಡುಗಡೆಯಾದದ್ದಕ್ಕೆ ನಿಸಾರ್, ಹರ್ಷ ವ್ಯಕ್ತಪಡಿಸಿದರು.
ಧ್ವನಿ ಸುರಳಿ ಬೆಲೆ 30ರೂಪಾಯಿ. ಸೀಡಿ ಬೆಲೆ 40 ರೂಪಾಯಿ.
(ದಟ್ಸ್ ಕನ್ನಡ ವಾರ್ತೆ)
Story first published: Monday, May 21, 2007, 5:30 [IST]