ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಸ್‌ ಫಲಿತಾಂಶ : ಭದ್ರಾವತಿಯಲ್ಲಿ ಭಾರೀ ಸಡಗರ

By Staff
|
Google Oneindia Kannada News

ಭದ್ರಾವತಿ : ಸ್ಥಳೀಯ ಯುವಕ ಡಿ.ಕಿರಣ್‌ ಐಎಎಸ್‌ ಪರೀಕ್ಷೆಯಲ್ಲಿ 359ನೇ ರ್ಯಾಂಕ್‌ ಪಡೆದು ಆಯ್ಕೆಯಾಗಿರುವುದು, ಪಟ್ಟಣದ ತುಂಬೆಲ್ಲಾ ಹರ್ಷದ ವಾತಾವರಣ ಉಂಟುಮಾಡಿದೆ.

ಎಚ್‌.ದೊಡ್ಡಪ್ಪ ಹಾಗೂ ಡಿ.ಎಂ.ಗಿರಿಜಮ್ಮ ದಂಪತಿಗಳ ಪುತ್ರ ಕಿರಣ್‌, ಪೇಪರ್‌ ಟೌನ್‌ನಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಓದಿದವರು. ಆನಂತರ ಶಿವಮೊಗ್ಗದ ಡಿವಿಎಸ್‌ ಕಾಲೇಜಿನಲ್ಲಿ ಪಿಯುಸಿ ಓದಿದ ಅವರು, ಶೇಕಡಾ 92 ಅಂಕಗಳೊಂದಿಗೆ ತೇರ್ಗಡೆಯಾಗಿದ್ದರು.

ಪಿಯುಸಿ ನಂತರ ಇಂಡಿಯನ್‌ ಕೌನ್ಸಿಲ್‌ ಆಫ್‌ ಅಗ್ರಿಕಲ್ಚರ್‌ ರಿಸರ್ಚ್‌(ಐಸಿಎಆರ್‌)ನಲ್ಲಿ ಅವರು ಬಿ.ಎಸ್ಸಿ., ಕೃಷಿ ಪದವಿ ಪಡೆದರು. ಮುಂದೆ ಭಾರತೀಯ ಕೃಷಿ ಕಾಲೇಜಿನಲ್ಲಿ ಎಂ.ಎಸ್ಸಿ., ಕೃಷಿ ಪದವಿ ಗಳಿಸಿದರು. ಇತ್ತೀಚೆಗಷ್ಟೇ ನವದೆಹಲಿಯ ಐಎಆರ್‌ನಲ್ಲಿ ಪಿಎಚ್‌ಡಿ ಮುಗಿಸಿ, ಫಲಿತಾಂಶ ಎದುರು ನೋಡುತ್ತಿದ್ದ ಅವರಿಗೆ ಅದಕ್ಕೂ ಮೊದಲು ಐಎಎಸ್‌ ಫಲಿತಾಂಶ ಸಂತಸ ತಂದಿದೆ.

ಪಟ್ಟಣದ ಜನತೆ ತಮ್ಮೂರಿನ ಹುಡುಗನ ಸಾಧನೆ ಬಗ್ಗೆ ಹೆಮ್ಮೆಯಿಂದ ಮಾತನಾಡಿಕೊಳ್ಳುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X