ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು ಇತಿಹಾಸ ಬದಲಿಸಿದ್ದಕ್ಕೆ ಕ್ಷಮಿಸಿ : ಆಕ್ಸ್ಫರ್ಡ್
ಬೆಂಗಳೂರು : ನಮ್ಮ ಉದ್ಯಾನನಗರಿಗೆ ಬೆಂಗಳೂರು ಎಂಬ ಹೆಸರು ಬರಲು ಕಾರಣವೇನು? -ನೀವು ಬೆಂದಕಾಳೂರಿನ ಕತೆ ಹೇಳಬಹುದು. ಆದರೆ ಆಕ್ಸ್ಫರ್ಡ್ ಹೇಳುವ ಕತೆಯೇ ಬೇರೆ! ಆ ಕತೆ ಹೀಗಿದೆ -
ಹೊಯ್ಸಳರ ಕಾಲದಲ್ಲಿದ್ದ ಸ್ಥಳೀಯ ಪಾಳೇಗಾರ ಕೆಂಪೇಗೌಡ, ಬಂಗಾಲಿ ಮಾತೃಭಾಷೆಯವರು ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರದೇಶವನ್ನು ವಶಪಡಿಸಿಕೊಂಡು ಬೆಂಗಳೂರು ಸ್ಥಾಪಿಸಿದ. ಪಶ್ಚಿಮ ಬಂಗಾಳದ ಮುಖ್ಯಸ್ಥ ‘ಬಂಗ’ ಎಂಬಾತನಿಂದಾಗಿ ಬೆಂಗಳೂರು ಎಂಬ ಹೆಸರು ಬಂದಿದೆ. ಇಂತಹ ತಪ್ಪು ಮಾಹಿತಿ ನೀಡಿದ್ದಕ್ಕಾಗಿ, ಇತಿಹಾಸವನ್ನು ತಪ್ಪಾಗಿ ಮುದ್ರಿಸಿದ್ದಕ್ಕಾಗಿ ಆಕ್ಸ್ಫರ್ಡ್ ಯೂನಿವರ್ಸಿಟಿ ಕ್ಷಮೆ ಕೋರಿದೆ. ಅಲ್ಲದೇ ಆ ನಿಘಂಟಿನ ಮಾರಾಟವನ್ನು ಸ್ಥಗಿತಗೊಳಿಸಿದ್ದು, ತಪ್ಪನ್ನು ಸರಿಪಡಿಸುವುದಾಗಿ ಹೇಳಿದೆ.
ಪ್ರಪಂಚದ ಪ್ರಮುಖ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಆಕ್ಸ್ಫರ್ಡ್ ಸಂಕ್ಷಿಪ್ತ ನಿಘಂಟಿನಲ್ಲಿ ಈ ತಪ್ಪು ಕಂಡು ಬಂದಿದೆ. 2005ರಲ್ಲಿ ಹೊರ ಬಂದ ಈ ನಿಘಂಟಿನ ಬಗ್ಗೆ ಕನ್ನಡ ಸಂಘಟನೆಗಳು ಅಸಮಾಧಾನಗೊಂಡಿದ್ದವು.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, May 19, 2007, 5:30 [IST]