ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೈದರಾಬಾದ್ನಲ್ಲಿ ಬಾಂಬ್ ಸ್ಫೋಟ : ಶನಿವಾರ ಕಂಡಂತೆ!
ಹೈದರಾಬಾದ್ :ಬಾಂಬ್ ಸ್ಫೋಟದಿಂದ ತಲ್ಲಣಗೊಂಡಿದ್ದ ನಗರ, ಶನಿವಾರ ಶಾಂತ ಸ್ಥಿತಿಗೆ ಮರಳುತ್ತಿದೆ. ಆದರೂ ಎಲ್ಲರ ಮನದಲ್ಲೂ ಏನೋ ಒಂದು ರೀತಿಯ ಆತಂಕ ಮತ್ತು ಭಯ.
ಮುಖ್ಯ
ವಿವರಗಳು
:
- ಮೆಕ್ಕಾ ಮಸೀದಿಯಲ್ಲಿ ಶುಕ್ರವಾರ ಸಂಭವಿಸಿದ ಬಾಂಬ್ ಸ್ಫೋಟ ಹಾಗೂ ಗೋಲಿಬಾರ್ನಿಂದ ಸತ್ತವರ ಸಂಖ್ಯೆ 14ಕ್ಕೆ ಏರಿದೆ. 60ಕ್ಕೂ ಅಧಿಕ ಮಂದಿಗೆ ಗಾಯ.
- ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದ ಹೈದರಾಬಾದ್ ಬಂದ್ ಶನಿವಾರ ಯಶಸ್ವಿ. ಆಂಧ್ರಪ್ರದೇಶದ ರಸ್ತೆ ಸಾರಿಗೆ ಬಸ್ಗಳು, ಆಟೋ ರಿಕ್ಷಾಗಳು ಸೇವೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದವು. ಒಸ್ಮಾನಿಯಾ ವಿವಿ ಪರೀಕ್ಷೆಗಳು ರದ್ದು.
- ಹೈದರಾಬಾದಿನ ಕೆಲವುಕಡೆ ಕಪ್ಪು ಧ್ವಜ ಹಿಡಿದು ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ.
- ಬಾಂಬ್ ಸ್ಫೋಟದ ಹಿಂದೆ ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆ ಹರ್ಕತ್ -ಉಲ್-ಜಿಹಾದ್-ಅಲ್-ಇಸಾಮಿ ಸಂಘಟನೆಯ ಕೈವಾಡ -ಒಂದು ಶಂಕೆ.
- ಬಾಂಬನ್ನು ಟಿಫಿನ್ ಬಾಕ್ಸ್ನಲ್ಲಿಟ್ಟು ಮೊಬೈಲ್ ಫೋನ್ ಮೂಲಕ ಸ್ಫೋಟಿಸಲಾಗಿದೆ : ಪೊಲೀಸರ ಹೇಳಿಕೆ.
- ಸ್ಫೋಟಕ್ಕೆ ಆರ್ಡಿಎಕ್ಸ್ ಬಳಸಿರುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ರಾಜಶೇಖರ್ ರೆಡ್ಡಿ ಹೇಳಿಕೆ.
- ಒಸ್ಮಾನಿಯಾ ಆಸ್ಪತ್ರೆಯಲ್ಲಿ ಗಾಯಾಳುಗಳ ತಪಾಸಣೆಯಲ್ಲಿ ಕೊರತೆ, ಜನರಿಂದ ಗಲಾಟೆ.
Story first published: Saturday, May 19, 2007, 5:30 [IST]