ನನ್ಗೆ ನ್ಯಾಯ ಕೊಡಿಸಿ... :ದೆಹಲಿಯಲ್ಲಿ ನರ್ಸ್ ಜಯಲಕ್ಷ್ಮಿ!
ನವದೆಹಲಿ : ನರ್ಸ್ ಜಯಲಕ್ಷ್ಮಿ, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸುವ ಮೂಲಕ, ‘ಜಯಲಕ್ಷ್ಮಿ-ಶಾಸಕ ರೇಣುಕಾಚಾರ್ಯ’ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಗಿರಿಜಾ ವ್ಯಾಸ್ ಅವರನ್ನು ಭೇಟಿಯಾಗಿ ಜಯಲಕ್ಷ್ಮಿ ದೂರು ಸಲ್ಲಿಸಿದ್ದು, ಲೈಂಗಿಕ ಕಿರುಕುಳ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಜಯಲಕ್ಷ್ಮಿ ಆಯೋಗಕ್ಕೆ ನೀಡಿದರು.
ಇದಲ್ಲದೆ ಶಾಸಕ ರೇಣುಕಾಚಾರ್ಯ ವಿರುದ್ಧ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೂ ಜಯಲಕ್ಷ್ಮಿ ದೂರು ಸಲ್ಲಿಸಿದರು.
ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ ಭಾರತೀಯ ಜನತಾ ಪಕ್ಷದವರು. ಶಾಸಕ ರೇಣುಕಾಚಾರ್ಯ ಕೂಡ ಭಾರತೀಯ ಜನತಾ ಪಕ್ಷದವರೇ. ಹಾಗಾಗಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದರೆ ನನಗೆ ನ್ಯಾಯ ಸಿಗುವ ನಂಬಿಕೆಯಿಲ್ಲ. ಅದಕ್ಕಾಗಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಹೇಳಿದರು.
(ಏಜನ್ಸೀಸ್)