ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರೇಯಸಿ ದೇಹವನ್ನು ಚೀಲಕ್ಕೆ ತುಂಬಿದ ಆಫೀಸ್ ಬಾಯ್!
ಬೆಂಗಳೂರು : ಪ್ರೇಯಸಿಯನ್ನು ಕೊಂದು, ಗೋಣಿ ಚೀಲದಲ್ಲಿ ಶವವನ್ನಿಟ್ಟು ಪರಾರಿಯಾದ ಪ್ರೇಮಿಗಾಗಿ, ಬೆಂಗಳೂರು ಪೊಲೀಸರು ಹುಡುಕಾಡುತ್ತಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಫೈಬರ್ ಟೆಕ್ ಕಂಪೆನಿಯ ಉದ್ಯೋಗಿ ಎಂ.ಎನ್.ಸುಕನ್ಯಾ(20) ಮೃತಪಟ್ಟ ನತದೃಷ್ಟೆ. ಆಕೆ ಕೆಲಸ ಮಾಡುತ್ತಿದ್ದ ಕಚೇರಿಯ ಆಫೀಸ್ ಬಾಯ್ ಸುಧಾಕರ್ನನ್ನು ಕೊಲೆಗಾರ ಎಂದು ಪೊಲೀಸರು ಶಂಕಿಸಿದ್ದಾರೆ.
ತಿಲಕ್ನಗರದ ಅಪಾರ್ಟ್ಮೆಂಟ್ನಲ್ಲಿದ್ದ ಸುಕನ್ಯಾ ಮತ್ತು ಸುಧಾಕರ್ ಪರಸ್ಪರ ಪ್ರೇಮಿಸುತ್ತಿದ್ದರು. ಮದುವೆಯಾಗುವಂತೆ ಸುಕನ್ಯಾ ಒತ್ತಾಯ ಮಾಡಿದಾಗ, ಸುಧಾಕರ್ ಈ ಕೃತ್ಯಕ್ಕೆ ಮುಂದಾದ. ಆಕೆಯ ಉಸಿರುಗಟ್ಟಿಸಿ ಕೊಂದು, ಗೋಣಿಚೀಲದಲ್ಲಿ ಶವವನ್ನು ತುಂಬಿ ಶೌಚಾಲಯಕ್ಕೆ ಎಸೆದಿದ್ದಾನೆ ಎನ್ನುವುದು ಪೊಲೀಸರ ಶಂಕೆ.
ತನ್ನ ಕುಕೃತ್ಯದ ನಂತರ ಕಚೇರಿಯ 65ಸಾವಿರ ರೂ. ಮತ್ತು ಒಂದು ಲಕ್ಷ ರೂಪಾಯಿಯ ಚೆಕ್ನೊಂದಿಗೆ ಸುಧಾಕರ್ ಪರಾರಿಯಾಗಿದ್ದಾನೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Story first published: Wednesday, May 16, 2007, 5:30 [IST]