ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಇಬ್ಬರು ಸಚಿವರನ್ನು ಕುಮಾರಸ್ವಾಮಿ ಕೈಬಿಡುವರೇ?

By Staff
|
Google Oneindia Kannada News

ಬೆಂಗಳೂರು : ಕ್ರೀಡಾ ಸಚಿವ ಆಲ್ಕೋಡು ಹನುಮಂತಪ್ಪ ಮತ್ತು ಕೃಷಿ ಮಾರುಕಟ್ಟೆ ಸಚಿವ ಶರಣಬಸಪ್ಪ ದರ್ಶನಾಪೂರ ಅವರ ಸಚಿವ ಸ್ಥಾನಕ್ಕೆ ಕುತ್ತು ಬಂದಿದೆ.

ಸಮಯಕ್ಕೆ ಸರಿಯಾಗಿ ಆಸ್ತಿ ವಿವರ ಸಲ್ಲಿಸದೇ, ಲೋಕಾಯುಕ್ತ ಕಾನೂನು ಭಂಗಗೊಳಿಸಿದ ಆರೋಪ, ಈ ಇಬ್ಬರು ಸಚಿವರ ಮೇಲಿದೆ. ಈ ಬಗ್ಗೆ ವಿಚಾರಣೆ ನಡೆಸಿದ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ, ಸೂಕ್ತ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿದ್ದಾರೆ.

ಮುಂದಿನ ಮೂರು ತಿಂಗಳೊಳಗಾಗಿ ಸಚಿವರಿಂದ ರಾಜೀನಾಮೆ ಪಡೆಯಬೇಕೆಂದು ಶಿಫಾರಸು ಪತ್ರದಲ್ಲಿ ಲೋಕಾಯುಕ್ತರು ಹೇಳಿದ್ದಾರೆ. ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳದಿದ್ದರೆ, ರಾಜ್ಯಪಾಲರಿಗೆ ವರದಿ ಸಲ್ಲಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶಿಫಾರಸನ್ನು ಮುಖ್ಯಮಂತ್ರಿಗಳು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು. ಒಂದು ವೇಳೆ ತಿರಸ್ಕರಿಸಿದರೆ, ಲೋಕಾಯುಕ್ತರಿಗೆ ಮುಖಭಂಗವಾಗುತ್ತದೆ. ನಂತರ ಮುಂದೇನು ಎಂಬುದು ಸದ್ಯದ ಕುತೂಹಲ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X