3ವಾರಕ್ಕೇ ವೈಫ್ ಫಿನಿಷ್: ಇದು ಎಂಥಾ ಪ್ರೇಮವಯ್ಯಾ?
ಬೆಂಗಳೂರು : ಮದುವೆಯಾಗಿ ಕೇವಲ 17ದಿನಗಳಾಗಿದ್ದವು. ಆಗಲೇ ದಾಂಪತ್ಯ ಕಹಿ ಆಯಿತು. ಆ ಪರಿಣಾಮ ಪತ್ನಿಯನ್ನು ಕೊಂದ ಪತಿರಾಯ ಪರಾರಿಯಾದ!
ಕೆಂಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆಯಂತಹ ಕುಕೃತ್ಯ ನಡೆಸಿದ ವ್ಯಕ್ತಿಯನ್ನು ವೆಂಕಟೇಶ್ ಎಂದು ಗುರ್ತಿಸಲಾಗಿದೆ. ಪ್ರೇಮದ ಅಮಲಲ್ಲಿ ಹೆತ್ತವರ ಬಿಟ್ಟು, ಪ್ರೇಮಿಯ ಜೊತೆಗೆ ಬಂದು, ಸಾವಿನ ಮನೆ ತಲುಪಿದ ನತದೃಷ್ಟೆಯ ಹೆಸರು; ಕಾಂತಾಮಣಿ(21).
ಹಿನ್ನೆಲೆ : ಕೊಡಗಿನ ಶನಿವಾರ ಸಂತೆಯ ಕಾಂತಾಮಣಿ ಮತ್ತು ಬೆಂಗಳೂರಿನ ದಾಸರಪಾಳ್ಯದ ಸೆಕ್ಯುರಿಟಿ ಗಾರ್ಡ್ ವೆಂಕಟೇಶ್ ನಡುವೆ ಪ್ರೇಮ ಅಂಕುರಿಸಿತ್ತು. ಹಿರಿಯರ ವಿರೋಧಕ್ಕೆ ಮಣಿಯದೇ, ಮನೆಬಿಟ್ಟು ಬಂದು ಮದುವೆಯಾಗಿದ್ದರು. ನಂತರ ದುಬಾಸಿ ಪಾಳ್ಯದಲ್ಲಿ ಬಂದು ನೆಲೆಸಿದ್ದರು.
ತನ್ನ ತಂದೆಯ ಮನೆಯಲ್ಲಿ ನೆಲೆಸೋಣ ಎಂಬ ವೆಂಕಟೇಶ್ ನಿರ್ಧಾರ, ಕಾಂತಾಮಣಿಗೆ ಸಮ್ಮತವಾಗಿರಲಿಲ್ಲ. ಈ ವಿಚಾರ ಇಬ್ಬರ ಮಧ್ಯೆ ವಿರಸಕ್ಕೆ ಕಾರಣವಾಗಿತ್ತು. ವಿರಸ ಜಗಳವಾಗಿ, ಕೊನೆಗೆ ವೆಂಕಟೇಶ್ ವೈರ್ನಿಂದ ಕಾಂತಾಮಣಿಯ ಕುತ್ತಿಗೆ ಬಿಗಿದು, ಉಸಿರುಗಟ್ಟಿಸಿ ಸಾಯಿಸಿದ. ನಂತರ ಪರಾರಿಯಾಗಿರುವ ವೆಂಕಟೇಶ್ಗಾಗಿ ಪೊಲೀಸರು ಹುಡುಕುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)