ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಸಿಯೂಟದ ಜವಾಬ್ದಾರಿ ನಮಗೆ ಬೇಡ : ಶಿಕ್ಷಕರ ಮೊರೆ
ಮೈಸೂರು : ಬಿಸಿಯೂಟದ ಯೋಜನೆಯಿಂದ ತಮಗೆ ಬಿಡುಗಡೆ ನೀಡುವಂತೆ ರಾಜ್ಯದ ಶಾಲಾ ಶಿಕ್ಷಕರು ಮೊರೆಯಿಟ್ಟಿದ್ದಾರೆ.
ಎಸ್ಡಿಎಂಸಿಗಳನ್ನು ಮುಂದುವರಿಸುವ ಕುರಿತು ಅಧ್ಯಯನ ನಡೆಸಲು ರಚಿಸಲಾಗಿರುವ ‘ವಿಧಾನ ಪರಿಷತ್ ಸಮಿತಿ’ ಮುಖ್ಯಸ್ಥ ಡಾ.ಹನುಮಂತಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಚಾರ ಬಹಿರಂಗಪಡಿಸಿದ್ದಾರೆ.
ರಾಜ್ಯಾದ್ಯಂತ ಶಾಲೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಶಿಕ್ಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಬಿಸಿಯೂಟ ಯೋಜನೆಯಲ್ಲಿ ತಾವು ಪಾಲ್ಗೊಳ್ಳುತ್ತಿರುವುದು, ಬೋಧನೆಯಲ್ಲಿ ಏಕಾಗ್ರತೆ ಸಾಧಿಸುವಲ್ಲಿ ದುಷ್ಪರಿಣಾಮ ಬಿರುತ್ತಿದೆ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಬಿಸಿಯೂಟ ಯೋಜನೆಯಿಂದ ಶಿಕ್ಷಕರಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಸಮಿತಿ ದೂರನ್ನು ಗಣನೆಗೆ ತೆಗೆದುಕೊಂಡಿದೆ. ಒಂದು ತಿಂಗಳೊಳಗೆ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ನೀಡಲಿದೆ ಎಂದು ಅವರು ವಿವರಿಸಿದರು.
(ಯುಎನ್ಐ)
Comments
Story first published: Tuesday, May 8, 2007, 5:30 [IST]