ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ಎದುರಿಸಬೇಕಿದ್ದ ಇಬ್ಬರು ವಿದ್ಯಾರ್ಥಿಗಳ ಆತ್ಮಹತ್ಯೆ! !

By Staff
|
Google Oneindia Kannada News

ಬೆಂಗಳೂರು : ಮೇ.9ರಂದು ಸಿಇಟಿ ಎದುರಿಸಬೇಕಾಗಿದ್ದ, ಇಬ್ಬರು ಪಿಯೂಸಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಮ್ಮ ನಿವಾಸಗಳಲ್ಲಿ ನೇಣು ಬಿಗಿದುಕೊಂಡು ಸಾವಿನ ಮನೆ ತಲುಪಿದ ಈ ವಿದ್ಯಾರ್ಥಿಗಳನ್ನು ಮೋಹಿತ್‌(18) ಮತ್ತು ವರುಣ್‌(17) ಎಂದು ಗುರ್ತಿಸಲಾಗಿದೆ. ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿ ಮೋಹಿತ್‌, ‘ಪಿಯೂಸಿಯಲ್ಲಿ ನನ್ನ ಸಾಧನೆ ಕಳಪೆ. ಹೀಗಾಗಿ ಸಾಯುತ್ತಿದ್ದೇನೆ. ನಾನು ಸತ್ತ ಮೇಲೆ, ನನ್ನ ಕಣ್ಣನ್ನು ದಾನ ಮಾಡಿ’ ಎಂದು ಸಾಯುವ ಮುನ್ನ ಪತ್ರ ಬರೆದಿಟ್ಟಿದ್ದಾನೆ.

ರಾಜರಾಜೇಶ್ವರಿ ನಗರದ ಬಿಇಎಂಎಲ್‌ ಲೇ ಔಟ್‌ನ ಇನ್ನೊಬ್ಬ ವಿದ್ಯಾರ್ಥಿ ವರುಣ್‌ ಸಾವಿಗೆ ಕಾರಣ ಸ್ಪಷ್ಪವಾಗಿಲ್ಲ. ಈತನಿಗೆ ಟೀವಿಯಲ್ಲಿ ಭಯಾನಕ ಸಿನಿಮಾ ಮತ್ತು ಕಾರ್ಟೂನ್‌ ನೋಡುವುದೆಂದರೆ ಪ್ರಾಣ.

ಯಾವುದೋ ಸಿನಿಮಾದ ನೇಣಿನ ದೃಶ್ಯವನ್ನು ಅನುಕರಿಸಲು ಹೋಗಿ, ಆಕಸ್ಮಿಕವಾಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ನಗರದ ಖ್ಯಾತ ವ್ಯಕ್ತಿತ್ವ ವಿಕಸನದ ಗುರು ಡಾ.ಭರತ್‌ ಚಂದ್ರ, ವರುಣ್‌ರ ಸಂಬಂಧಿ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X