ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಡಿಕೇರಿ ನಗರದ ಸ್ನೇಕ್ ಮನು ರಸ್ತೆ ಅಪಘಾತದಲ್ಲಿ ಬಲಿ
ಮಡಿಕೇರಿ : ಮನೆ ಪ್ರವೇಶಿಸುವ ಹಾವುಗಳನ್ನು ಹಿಡಿದು, ಕಾಡಿಗೆ ಬಿಟ್ಟು ಬರುವ ಹವ್ಯಾಸ ಬೆಳೆಸಿಕೊಂಡಿದ್ದ ಸ್ನೇಕ್ ಮನು ಅಲಿಯಾಸ್ ಮನು ಮುತ್ತಣ್ಣ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಶ್ರೀಮಂಗಲದ ಬಳಿ ತನ್ನ ಗೆಳೆಯನ ಜೊತೆ ಮನು ಬೈಕ್ನಲ್ಲಿ ಪ್ರಯಾಣ ಮಾಡುತ್ತಿದ್ದರು. ಮನು ಬೈಕ್, ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
27ವರ್ಷದ ಸ್ನೇಕ್ ಮನು, ಈ ಭಾಗದ ಜನರಿಗೆ ಚಿರಪರಿಚಿತರು. ಎಲ್ಲಿ ಹಾವಿದೆ ಎಂದರೂ, ಅಲ್ಲಿಗೆ ಹಾಜರಾಗಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬರುತ್ತಿದ್ದರು. ಮನು ನಿಧನಕ್ಕೆ ಸಾರ್ವಜನಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.
(ಯುಎನ್ಐ)
Comments
Story first published: Thursday, May 3, 2007, 5:30 [IST]