ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ ಡಾ. ರಾಜ್ ಹೆಸರಲ್ಲಿ ವಿಧಾನಸಭಾ ಕ್ಷೇತ್ರ ಬೇಕೇಬೇಕು’
ಬೆಂಗಳೂರು : ರಾಜಧಾನಿ ನಗರದ ವಿಧಾನ ಸಭಾ ಕ್ಷೇತ್ರಗಳಿಗೆ ನಟ ಡಾ.ರಾಜ್ಕುಮಾರ್, ಅಂಬೇಡ್ಕರ್, ಸರ್ವಜ್ಞ ಮತ್ತು ಕೆಂಪೇಗೌಡರ ಹೆಸರಿಡಬೇಕು ಎಂಬ ಪ್ರಸ್ತಾವನೆಗಳು ಕೇಳಿ ಬಂದಿವೆ.
ಕ್ಷೇತ್ರ ಪುನರ್ ವಿಂಗಡಣಾ ಆಯೋಗದ ಅಧ್ಯಕ್ಷ ಕುಲದೀಪ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ , ಶಾಸಕರು, ಜನಪ್ರತಿನಿಧಿಗಳು ಕೆಲವು ಸಲಹೆಗಳನ್ನು ನೀಡಿದ್ದಾರೆ. ಮುಸ್ಲಿಂರಿಗೆ ಅನುಕೂಲವಾಗುವಂತೆ ರಾಜಧಾನಿಯಲ್ಲಿ ಮೀಸಲಾತಿ ರೂಪಿಸಿ ಎಂಬ ಸಲಹೆಯೂ ಕೇಳಿ ಬಂತು.
ಹಾಲಿ ಇರುವ ಪಟ್ಟಣಗೆರೆ ವಿಧಾನಸಭಾ ಕ್ಷೇತ್ರಕ್ಕೆ ಮಲ್ಲೇಶ್ವರ ಕ್ಷೇತ್ರವೆಂದು, ಭಾರತೀನಗರ ಕ್ಷೇತ್ರಕ್ಕೆ ಸರ್ವಜ್ಞ ಕ್ಷೇತ್ರವೆಂದು, ಬೆಂಗಳೂರು ಸಿಟಿ-6 ಕ್ಷೇತ್ರಕ್ಕೆ ಶಾಂತಿನಗರ ಕ್ಷೇತ್ರ ಅಥವಾ ಸಿ.ವಿ.ರಾಮನ್ ಕ್ಷೇತ್ರವೆಂದು, ಡಿ.ಜಿ.ಹಳ್ಳಿ ಮೀಸಲು ಕ್ಷೇತಕ್ಕೆ ಡಾ.ಅಂಬೇಡ್ಕರ್ ಕ್ಷೇತ್ರವೆಂದು ಪುನರ್ ನಾಮಕರಣ ಮಾಡಬೇಕು ಎನ್ನುವ ಮಾತುಗಳು ಕೇಳಿ ಬಂದಿವು.
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, May 3, 2007, 5:30 [IST]