ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೆ ಬಿಸ್ಮಿಲ್ಲಾ ಖಾನ್‌ ಕುಟುಂಬದಿಂದ ಬಹಿಷ್ಕಾರ!

By Staff
|
Google Oneindia Kannada News

ವಾರಾಣಾಸಿ : ಖ್ಯಾತ ಶಹನಾಯಿ ವಾದಕ ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಅವರ ಸ್ಮಾರಕ ನಿರ್ಮಾಣಕ್ಕೆ ಆಡಳಿತ ಯಂತ್ರ ಮೀನಾಮೇಷ ಎಣಿಸುತ್ತಿದೆ.

ಆಡಳಿತ ಯಂತ್ರದ ಧೋರಣೆ ಖಂಡಿಸಿ, ಗುರುವಾರದ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಿ, ಬಿಸ್ಮಿಲ್ಲಾ ಖಾನ್‌ ಕುಟುಂಬ ಅಸಮಾಧಾನ ಪ್ರದರ್ಶಿಸಿದೆ.

ವಾರಾಣಾಸಿಯ ದಕ್ಷಿಣ ಭಾಗದಲ್ಲಿರುವ ನಮ್ಮ ಮನೆಯಲ್ಲಿ 60 ಮತಗಳಿವೆ. ನಮ್ಮ ತಂದೆಯ ಸಮಾಧಿ ಬಳಿ ಕೆಂಪು ಗೋಪುರದ ಸ್ಮಾರಕ ನಿರ್ಮಾಣ ಮಾಡುವುದಾಗಿ ಸರ್ಕಾರ ಹೇಳುತ್ತಲೇ ಬರುತ್ತಿದೆ. ಆದರೆ ಕಾಮಗಾರಿ ಆರಂಭಗೊಳ್ಳುತ್ತಿಲ್ಲ ಎಂದು ಸಂಗೀತಗಾರ ಮತ್ತು ಬಿಸ್ಮಿಲ್ಲಾ ಖಾನ್‌ರ ಎರಡನೇ ಪುತ್ರ ನಯ್ಯರ್‌ ಹುಸೇನ್‌ ಖಾನ್‌(60) ಅಭಿಪ್ರಾಯಪಟ್ಟಿದ್ದಾರೆ.

ಆಗಸ್ಟ್‌ 21ರಂದು ಮೃತರಾದ ನಮ್ಮ ತಂದೆ, ದೇಶಕ್ಕೆ ಗೌರವ ತಂದವರು. ಅವರ ಐವರು ಪುತ್ರರ ಕುಟುಂಬಗಳು ಚುನಾವಣೆ ಬಹಿಷ್ಕರಿಸಿವೆ. ರಾಜ್ಯ ಸರ್ಕಾರ ಮಾತು ತಪ್ಪಿದೆ ಎಂದು ಹುಸೇನ್‌ ಖಾನ್‌ ಹೇಳಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X