ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾವೇರಿ ನೀರು ನಮಗೆ ಇನ್ನಷ್ಟು ಬೇಕು : ಕೇರಳ ಸರ್ಕಾರWednesday, May 02 2007, 12:35 Hrs (IST)
ಕೇರಳ : ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಗದ್ದಲ, ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಮಧ್ಯೆ ಹೆಚ್ಚಿನ ಕಾವೇರಿ ನೀರಿಗಾಗಿ ಒತ್ತಾಯಿಸಿ ಕೇರಳ ಸರ್ಕಾರ, ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಕಾವೇರಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ, ಸುಪ್ರೀಂಕೋರ್ಟ್ಗೆ ಕೇರಳ ಸರ್ಕಾರ ಅರ್ಜಿ ಸಲ್ಲಿಸಿದೆ. ನಮ್ಮ ನಾಡಿಗೆ 30ಟಿಎಂಸಿ ನೀರು ಹಂಚುವ ನ್ಯಾಯಮಂಡಳಿ ತೀರ್ಪು ಅನ್ಯಾಯಕರ. ರೈತರು ಈ ಪರಿಣಾಮ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಕೇರಳ ಸರ್ಕಾರ ಹೇಳಿದೆ.
ಪರಸ್ಪರ ಮಾತುಕತೆ ಮೂಲಕ ಕಾವೇರಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಒತ್ತಿ ಒತ್ತಿ ಹೇಳುತ್ತಿದೆ. ಆದರೂ ಉಭಯ ರಾಜ್ಯಗಳು ನ್ಯಾಯಾಂಗ ಹೋರಾಟಕ್ಕೆ ಸಜ್ಜಾಗಿವೆ.
ಇತ್ತ ಕೇಂದ್ರದ ಮಧ್ಯಸ್ಥಿಕೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತ ಕರ್ನಾಟಕದ ರೈತ ಸಂಘಗಳು, ನವದೆಹಲಿಯಲ್ಲಿ ಕಾವೇರಿ ಹೋರಾಟವನ್ನು ಮುಂದುವರೆಸಿವೆ.
(ಏಜನ್ಸೀಸ್)
Comments
Story first published: Wednesday, May 2, 2007, 5:30 [IST]