ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಏ.30: ಭಣಗುಟ್ಟುವ ಕೆಆರ್ಎಸ್ ಬೃಂದಾವನ ಪುನಾರಂಭ
ಮೈಸೂರು : ಏ.30ರಿಂದ ಪ್ರವಾಸಿಕರು ಎಂದಿನಂತೆ ಕೆಆರ್ಎಸ್ನ ಬೃಂದಾವನವನ್ನು ವೀಕ್ಷಿಸಬಹುದು.
ಸ್ಥಳಕ್ಕೆ ಭೇಟಿದ ದಕ್ಷಿಣ ವಲಯದ ಐಜಿಪಿ ಆರ್.ಪಿ.ಶರ್ಮ, ಬೃಂದಾವನ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕಾವೇರಿ ನ್ಯಾಯಮಂಡಳಿ ತೀರ್ಪಿನ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರಿಗೆ, ಬೃಂದಾವನ ಪ್ರವೇಶವನ್ನು ನಿಷೇಧಿಸಲಾಗಿತ್ತು. ಹೀಗಾಗಿ ಕಳೆದ 12ವಾರಗಳಿಂದ ಬೃಂದಾವನ ಬಿಕೋ ಎನ್ನುತ್ತಿತ್ತು.
ಬೃಂದಾವನ ಸುತ್ತಮುತ್ತಲಿನ ಅಂಗಡಿ, ಹೋಟೆಲ್ ಮತ್ತಿತರ ಉದ್ದಿಮೆಗಳು ಮತ್ತು ಸಾರ್ವಜನಿಕರ ಒತ್ತಾಯಕ್ಕೆ ಮಣಿದು, ಪೊಲೀಸರು ಬೃಂದಾವನಕ್ಕೆ ಪ್ರವೇಶ ಕಲ್ಪಿಸಿದ್ದಾರೆ. ಆದರೆ ಮಳೆರಾಯನ ಕೊರತೆಯಿಂದಾಗಿ, ಕೆಆರ್ಎಸ್ ಜಲಾಶಯ ಭಣಗುಟ್ಟುತ್ತಿದೆ. ಬಣ್ಣದ ನೀರಿನ ಚಿಲುಮೆಗಳು ವೈಭವ ಮುಗಿದಂತೆ, ಸಪ್ಪೆ ಮೋರೆ ಹಾಕಿವೆ. ಪ್ರತಿದಿನವೂ ಸಾವಿರಾರು ಪ್ರವಾಸಿಕರು, ಬೃಂದಾವನಕ್ಕೆ ಭೇಟಿ ನೀಡುತ್ತಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, April 28, 2007, 5:30 [IST]