ವಿಶ್ವ ಗೋ ಸಮ್ಮೇಳನ : ದಿನ-5ಜಗತ್ತಿಗೆ ಇಬ್ಬರು ತಾಯಿ; ಗೋಮಾತಾ ಮತ್ತು ಭೂಮಾತಾ...
ವಿಶ್ವ
ಗೋ
ಸಮ್ಮೇಳನದ
ವಿವಿಧ
ವೇದಿಕೆಗಳಲ್ಲಿ
ಮತ್ತು
ಗೋಷ್ಠಿಗಳಲ್ಲಿ
ಕೇಳಿ
ಬಂದ
ಅಭಿಪ್ರಾಯ
ಸಾರ...
- ಸುರೇಶ್ ಮುರೂರು
ರಾಜಕೀಯ ಶಕ್ತಿ ಮೇಲೆ ಧರ್ಮ ಶಕ್ತಿ ಇರಬೇಕು. ರಾಜಕೀಯ ವ್ಯಕ್ತಿಗಳು ತಪ್ಪು ಮಾಡಬಹುದು.. ಮಾಡುತ್ತಾರೆ. ಆದರೆ ಧರ್ಮ ಪೀಠ ತಪ್ಪು ಮಾಡುವುದಿಲ್ಲ . ಆ ಕಾರಣ ಧರ್ಮ ಶಕ್ತಿಯ ಅಡಿಯಲ್ಲಿ ರಾಜಕೀಯ ಶಕ್ತಿ ಇರಬೇಕು.
ಮಾಜಿ ಸಂಸದ ಬಸವರಾಜ್ ಪಾಟೀಲ್ ಸೇಡಂ : ಗೋ ರಕ್ಷಣೆಯೆಂದರೆ ಮಾನವೀಯ ಕೆಲಸ, ಮಾನವೀಯತೆಯೇ ಧರ್ಮ ಎಂದು ಹೇಳಿ ಶ್ರೀಗಳು ಕೈಗೊಂಡ ಗೋ ರಕ್ಷಣೆಯ ಕಾರ್ಯಕ್ಕೆ ಶಕ್ತಿ ತುಂಬಬೇಕು. ಈ ದೇಶದ ರಾಷ್ಟ್ರಪತಿ ಅಬ್ದುಲ್ ಕಲಾಂರವರು ಕಾಣುತ್ತಿರುವ ಶ್ರೇಷ್ಠ ಭಾರತದ ಕನಸನ್ನು ಗೋರಕ್ಷಣೆಯ ಮೂಲಕ ನನಸುಗೊಳಿಸಬೇಕು.
ಪ್ರೀತಿಯಿಂದ ಮನೆಮನೆಯಲ್ಲಿ ಗೋವನ್ನು ಸಾಕಿ ಗೋವಿನ ಕಣ್ನೀರು ಒರೆಸಿದರೆ ಮನೆಯ ಮಕ್ಕಳಲ್ಲೂ ಉತ್ತಮ ಸಂಸ್ಕಾರ ಮೂಡುತ್ತದೆ.
ಸಂಸದ ಪ್ರಹ್ಲಾದ ಜೋಷಿ : ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಲ್ಲಿ ನೋಡಬಾರದು. ಗೋ ಸಂರಕ್ಷಣೆಯ ಮೂಲಕ ಶ್ರೀ ರಾಘವೇಶ್ವರ ಸ್ವಾಮಿಗಳು ಜಗನ್ಮಾತೆಯ ವಿಶೇಷತೆಯನ್ನ ಲೋಕಕ್ಕೆ ತಿಳಿಸುತ್ತಾ ಜನಜಾಗೃತಿ ಮಾಡುತ್ತಿದ್ದಾರೆ, ತನ್ಮೂಲಕ ಸಮಾಜಕ್ಕೆ ಶಕ್ತಿಯನ್ನು ತುಂಬುತ್ತಿದ್ದಾರೆ. ಇದರ ಸದುಪಯೋಗಪಡಿಸಿಕೊಂಡು ಶ್ರೀಗಳ ಕನಸನ್ನು ಸಾಕಾರಗೊಳಿಸೋಣ.
ಋಷಿ ಪ್ರಭಾಕರ ಗುರೂಜಿ : ವಿದೇಶದಲ್ಲಿ ಗೋವಿನ ಚಿಂತನೆಯೆ ಬೇರೆ ಇದೆ. ಹಾಲುಕೊಡುವ ತನಕ ಹಸುವನ್ನು ಸಾಕಿ ನಂತರ ಅದರ ಮಾಂಸವನ್ನು ಭಕ್ಷಿಸುತ್ತಾರೆ. ಆದರೆ ನಾವು ಗೋವನ್ನು ತಾಯಿಯ ರೂಪದಲ್ಲಿ ನೋಡುತ್ತೇವೆ. ಮಗುವಾಗಿದ್ದಾಗ ಒಂದುವರ್ಷದವರೆಗೆ ತಾಯಿಯ ಹಾಲನ್ನು ಕುಡಿದರೂ, ನಂತರ ಸಾಯುವ ತನಕವೂ ಆಕಳ ಹಾಲನ್ನು ಕುಡಿಯುತ್ತೇವೆ. ಹಾಗಾಗಿಯೆ ಗೋವು ನಮಗೆ ಮಾತೆ, ಪೂಜ್ಯಳು ಆಗಿರುವ ಗೋವಿನ ರಕ್ಷಣೆ ಆಗಲೆ ಬೇಕಾಗಿದೆ.
ರಾಘವೇಶ್ವರ ಸ್ವಾಮೀಜಿ : ಜಗತ್ತಿಗೆ ಇಬ್ಬರು ತಾಯಿ. ಗೋಮಾತಾ ಮತ್ತು ಭೂಮಾತಾ. ಗೋಮಾತೆಯಿಂದ ಭೂ ಮಾತೆ ಫಲವತ್ತತೆ ಹೆಚ್ಚುತ್ತದೆ. ಪರಿಣಾಮ ತಿನ್ನಲು ಆಹಾರ ಸಿಗುತ್ತದೆ. ಗೋಮಾತಾ- ಭೂಮಾತಾ ಎಂದು ಪ್ರತ್ಯೇಕಿಸಿದ್ದರಿಂದ ದುರಂತ ಎದುರಾಗಿದೆ.
ಈ ಸಂದರ್ಭ ಅನ್ನವನ್ನು ಅಮೃತ ಮಾಡಲು ದೇಶಿ ಸಂಸ್ಕೃತಿ ಪುನರುತ್ಥಾನವಾಗಲು ಗೋ ವಂಶ ಉಳಿಸಿ. ಇಲ್ಲಿ ಹಸಿರು ಕ್ರಾಂತಿ ಗಿಂ ತ ಮೊದಲು ಹಸು ಕ್ರಾಂತಿ ಆಗಬೇಕು.
ಇದು ಗೋವಿನ ಸಮ್ಮೇಳನ ಮಾತ್ರವಲ್ಲ, ವಿಷ ಮುಕ್ತ ಸಮ್ಮೇಳನ. 1947ರಲ್ಲಿ ಸ್ವಾತಂತ್ರ್ಯಬಂದ ನಂತರ ಕೃಷಿಕ ಮತ್ತು ಗೋವಿಗೆ ಸ್ವಾತಂ ತ್ರ್ಯ ಹರಣವಾಯಿತು. ಆ ಸ್ವಾಂತತ್ರ್ಯ ದೊರಕಿಸಿಕೊಡುವುದು ತಮ್ಮ ಗುರಿ.
ಖಟಿ ಜಯ್ು ಕುಮಾರ್ : ಮನುಷ್ಯ ಮೂಲಭೂತವಾಗಿ ಮಾಂಸಹಾರಿಯಲ್ಲ ಅವನ ದೇಹ ರಚನೆ ಮಾಂಸಹಾರಕ್ಕೆ ಪೂರಕವಾಗಿಲ್ಲ. ಮೊದಲಿಗೆ ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದ. ಆಹಾರ ಕೊರತೆಯುಂಟಾದಾಗ ಮಾಂಸಹಾರಿಯಾಗಿ ಮನುಷ್ಯ ಬದಲಾದ.
ಗೋವನ್ನು ಸದಾ ಪ್ರೀತಿಸುವ ಶ್ರೀ ರಾಘವೇಶ್ವರರ ಹೃದಯ, ತಾಯಿ ಹೃದಯ. ಸದಾ ನಗುಮೊಗದೊಂದಿಗೆ ನಮ್ಮೆಲ್ಲರ ಕಷ್ಟಕ್ಕೆ ಪರಿಹಾರ ಹೇಳುವ ಶ್ರೀಗಳು ಗೋರಕ್ಷಣೆಗಾಗಿ ಕಟಿ ಬದ್ದರಾಗಿರುವ ಸಂದರ್ಭದಲ್ಲಿ ನಾವು ನಮ್ಮ ಮನೆಗಳಲ್ಲಿ ಗೋವನ್ನು ಸಾಕುವ ಮೂಲಕ ಶ್ರೀಗಳ ಯೋಜನೆಯನ್ನು ಬೆಂಬಲಿಸಬೇಕು.
ಗೋಪಾಲ ಗೌರವ : ವಿಶ್ವಗೋ ಸಮ್ಮೇಳನದಲ್ಲಿ ಗೋಪಾಲ ಗೌರವ ಪ್ರಶಸ್ತಿ ಒಂದು ಸಂಸ್ಥೆಗೆ ಹಾಗೂ ಮತ್ತೊಬ್ಬ ವ್ಯಕ್ತಿಗೆ ದೊರಕಿದೆ. ಮಹಾರಾಷ್ಟ್ರದ ಏಕಲ್ ವಿದ್ಯಾಲಯ ಗ್ರಾಮಿಣ ಅಭಿವೃದ್ಧಿ ಯೋಜನೆಯಲ್ಲಿ ಅನೇಕ ಗ್ರಾಮಗಳನ್ನು ಸಂಪೂರ್ಣವಿಕಾಸವಾಗುವಂತೆ ಮಾಡಿದೆ. ಅಲ್ಲದೆ ಸರಕಾರದ ಯಾವುದೇ ಧನ ಸಹಾಯ ಪಡೆಯದೆ ಸಂಸ್ಥೆ ನಡೆಸಿಕೊಂಡು ಬಂದ ಸಾಮಾಜಿಕ ಕಾರ್ಯವನ್ನು ಗೌರವಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಅಲ್ಲದೆ 2010 ಗ್ರಾಮವಿಕಾಸಯೋಜನೆಯಡಿ ಒಂದು ಲಕ್ಷಕ್ಕೂ ಹೆಚ್ಚು ಗೋವುಗಳನ್ನು ವಿತರಿಸುವ ಸಂಕಲ್ಪವಿದೆಯೆಂದು ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಪ್ರದಾನ ಸಂಚಾಲಕ್ ರಾಘವನ್ ಹೇಳಿದರು.
ಅದೇ ರೀತಿ ಡಾ. ಚಂದ್ರಶೇಖರ್ ನೌಟಿಯಾಲ, ನವದೆಹಲಿಯವರು. ಗೋವಿನ ಕುರಿತಾಗಿ ನಡೆಸಿದ ಅನೇಕ ಸಂಶೋಧನೆ ಹಾಗೂ ಗೋ ಮೂತ್ರದಿಂದ ತಯಾರಿಸುವ ಮೂರುವಸ್ತುಗಳ ಮೇಲೆ ಅಂತಾರಾಷ್ತ್ರೀಯ ಪೇಟೆಂಟ್ ಪಡೆದ ಹಿನ್ನೆಲೆಯಲ್ಲಿ ಶ್ರೀಮಠದಿಂದ ಗೋಪಾಲ ಗೌರವ ಪ್ರಶಸ್ತಿಯನ್ನು ನೀಡಿ ಶ್ರೀಗಳು ಗೌರವಿಸಿದರು.
ಗೋವುಗಳ ದಾನ : ಪ್ರತಿ ದಿನವೂ ನೂರಕ್ಕು ಹೆಚ್ಚು ಗೋದಾನ ಮಾಡುವ ಶ್ರೀಗಳ ಸಂಕಲ್ಪದಂತೆ ಗೋ ಸಮ್ಮೇಳನದಲ್ಲಿ, ಹೊಸನಗರ ತಾಲ್ಲೂಕು ಜಯನಗರ ಪಂಚಾಯ್ತಿ ವ್ಯಾಪ್ತಿಯ ನಾಲ್ಕು ಗ್ರಾಮದ 135 ಫಲಾನುಭವಿಗಳಿಗೆ ಗೋವನ್ನು ನೀಡಲಾಯಿತು. ಪಂಚಾಯ್ತಿ ಅಧ್ಯಕ್ಷರಿಗೆ ಸಾಂಕೇತಿಕವಾಗಿ ಒಂದು ಗೋವನ್ನು ನೀಡುವ ಮೂಲಕ ಶ್ರೀಗಳು ಗೋದಾನ ಮಾಡಿದರು.
ವಿಶ್ವಕೋಶ ಲೋಕಾರ್ಪಣೆ : ಗೋವಿಗೆ ಸಂಬಂಧಪಟ್ಟಂತೆ ಏಳು ಭಾಗಗಳಲ್ಲಿ ಪ್ರಕಟಗೊಳ್ಳಲಿರುವ ಗೋ ವಿಶ್ವಕೋಶದ ಮೊದಲ ಪ್ರಕಟಣೆಯನ್ನು ಸಭೆಯಲ್ಲಿ ಇಂದು ಶ್ರೀಗಳು ಬಿಡುಗಡೆಗೊಳಿಸಿದರು. ಗೋ ವಿಜ್ಞಾನ ಎಂಬುದು ಮೊದಲ ಪ್ರಕಟಣೆಯಾಗಿದೆ.
ನವನೀತ ಸ್ಪರ್ಧಿಗಳಿಗೆ ಬಹುಮಾನ : ವಿಶ್ವ ಗೋ ಸಮ್ಮೇಳನದ ವಿಶೇಷ ಕಾರ್ಯಕ್ರಮಗಳಲ್ಲೊಂದಾಗಿದ್ದ ನವನೀತ ವಿಭಾಗದ ಕನ್ನಡ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಭೆಯಲ್ಲಿ ಶ್ರೀ ಗುರುಗಳು, ಪ್ರಶಸ್ತಿ ಪತ್ರ ಹಾಗೂ ಶ್ರೀ ಮಂತ್ರಾಕ್ಷತೆ ನೀಡಿ ಗೌರವಿಸಿದರು.