ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಿಎಸ್ಸೆಸ್ ಸಾಹಿತ್ಯ ಪಸರಿಸಲು ಸರ್ಕಾರದಿಂದ 40ಲಕ್ಷ ವೆಚ್ಚ
ಬೆಂಗಳೂರು : ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಸಾಹಿತ್ಯವನ್ನು ಎಲ್ಲೆಡೆಗೂ ಪಸರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಶಿವರುದ್ರಪ್ಪ ಅವರ ಕೃತಿಗಳನ್ನು 40 ಲಕ್ಷ ರೂ.ಗಳಿಗೆ ಖರೀದಿಸಿ, ರಾಜ್ಯದ ಎಲ್ಲಾ ಗ್ರಂಥಾಲಯಗಳಿಗೂ ಪೂರೈಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ. ವಿಶ್ವ ಪುಸ್ತಕ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಕಾನೂನು ಮತ್ತು ನಿಯಮಗಳನ್ನು ಬದಿಗೊತ್ತಿ 2500 ಪ್ರತಿಗಳ ಖರೀದಿಸಲಾಗುತ್ತಿದೆ. ರಾಷ್ಟ್ರಕವಿಯ ವಿಚಾರಗಳನ್ನು ನಾಡಿಗೆ ತಿಳಿಸುವುದು ಸರ್ಕಾರದ ಉದ್ದೇಶ. ಸಭೆ ಸಮಾರಂಭಗಳಲ್ಲಿ ಹಾರ ತುರಾಯಿ ಬದಲಿಗೆ ಪುಸ್ತಕ ನೀಡುವ ಪರಿಪಾಠ ಬೆಳೆಯಬೇಕು ಎಂದು ಸಚಿವರು ಆಶಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, April 24, 2007, 5:30 [IST]