ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಲ್ಲಿ ಕಾಲರಾ ಮತ್ತು ಕರಳುಬೇನೆ ಇದೆ ಎಚ್ಚರಿಕೆ!
ಬೆಂಗಳೂರು : ತೆರೆದಿಟ್ಟ ಹಣ್ಣು ಹಾಗೂ ತಿಂಡಿಗಳ ಸಹವಾಸಕ್ಕೆ ಇನ್ಮುಂದೆ ಹೋಗಬೇಡಿ.. ಯಾಕೆಂದರೆ, ನಗರದಲ್ಲಿ ಕಾಲರಾ ಮತ್ತು ಕರಳು ಬೇನೆ ವ್ಯಾಪಿಸುತ್ತಿದೆ.
ಅಕಾಲದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಈ ಪರಿಣಾಮ ರಾಜಧಾನಿಯಲ್ಲಿ 7 ಕಾಲರಾ ಮತ್ತು 97 ಕರಳು ಬೇನೆ ಪ್ರಕರಣಗಳು ದಾಖಲಾಗಿವೆ. ವಿವಿಧ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲುಷಿತ ನೀರು ಮತ್ತು ಕಲುಷಿತ ಆಹಾರದಿಂದ ಕಾಲರಾ ಬರುತ್ತದೆ. ನಗರದ ಹಲಸೂರು, ಹೊಸ ಬೈಯಪ್ಪನ ಹಳ್ಳಿ, ಯಶವಂತಪುರದ ಅಂಬೇಡ್ಕರ್ ನಗರ, ಟ್ಯಾನರಿ ರಸ್ತೆ, ಅಜಾದ್ ನಗರ ಮತ್ತಿತರ ಪ್ರದೇಶಗಳಲ್ಲಿ, ವಿಶೇಷವಾಗಿ ಕೊಳಗೇರಿಗಳಲ್ಲಿ ಈ ರೋಗ ಪತ್ತೆಯಾಗಿದೆ.
ಜ್ವರ, ವಾಂತಿ, ಮೈಕೈ ನೋವು, ಹೊಟ್ಟೆ ನೋವು, ನರಗಳ ನೋವು -ಹೀಗೆ ಯಾವುದೇ ಲಕ್ಷಣ ನಿಮ್ಮಲ್ಲಿ ಕಾಣಿಸಿಕೊಂಡರೇ, ಮೈಮರೆತು ಮೆಡಿಕಲ್ ಸ್ಟೋರ್ನ ಮಾತ್ರೆ ನುಂಗಿ ಸುಮ್ಮನಾಗಬೇಡಿ.. ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ.. ಎಂದು ವೈದ್ಯರು ಸಲಹೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Story first published: Monday, April 23, 2007, 5:30 [IST]