ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಹೇಳುವುದೆಲ್ಲ ಸತ್ಯ... ಪ್ಲೀಸ್‌ ನಂಬಿ... ಯಡಿಯೂರಪ್ಪ-ಶೋಭಾ ನಂಟು ಪ್ರಸ್ತಾಪಿಸಿದ ಜಯಲಕ್ಷ್ಮಿ

By Staff
|
Google Oneindia Kannada News

ಬೆಂಗಳೂರು : ಹೊನ್ನಾಳಿ ಶಾಸಕ ರೇಣುಕಾಚಾರ್ಯರ ವಿರುದ್ಧ ನಾನು ಮಾಡಿರುವ ಎಲ್ಲಾ ಆರೋಪಗಳು ಸಂಪೂರ್ಣ ಸತ್ಯ. ಬೇಕಿದ್ದರೆ ನನ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ನರ್ಸ್‌ ಜಯಲಕ್ಷ್ಮಿ ಸವಾಲು ಹಾಕಿದ್ದಾರೆ.

ರೇಣುಕಾಚಾರ್ಯರ ಲೈಂಗಿಕ ಕಿರುಕುಳ ತಾಳಲಾರೆ ಎಂದು ಪತ್ರಬರೆದು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಜಯಲಕ್ಷ್ಮಿ, ಆಸ್ಪತ್ರೆಯಲ್ಲಿ ಸುಧಾರಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಆಸ್ಪತ್ರೆ ಹಾಸಿಗೆ ಮೇಲೆ ಕುಳಿತೇ ಸುದ್ದಿಗಾರರ ಜೊತೆ ಅವರು ಮಾತನಾಡುತ್ತಿದ್ದರು.

ನಮ್ಮಿಬ್ಬರ ಮದುವೆಗೆ ರಾಜ್ಯದ ಉಪಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಿಸುತ್ತಾರೆ. ಶೋಭಾ ಕರಂದ್ಲಾಜೆ ಜೊತೆ ಯಡಿಯೂರಪ್ಪ ಅವರೇ ಮದುವೆಯಾಗಿರುವಾಗ, ನಮ್ಮಿಬ್ಬರ ಮದುವೆ ತಪ್ಪಾಗುವುದಿಲ್ಲ ಎಂದು ರೇಣುಕಾಚಾರ್ಯ ನನ್ನನ್ನು ಪೀಡಿಸುತ್ತಿದ್ದ ಎಂದು ಜಯಲಕ್ಷ್ಮಿ ಆರೋಪಿಸಿದರು.

ನನಗೆ ನ್ಯಾಯ ಸಿಗುವ ತನಕ ಹೋರಾಟ ಮುಂದುವರೆಯುತ್ತೇನೆ. ಯಡಿಯೂರಪ್ಪ ನ್ಯಾಯ ಕೊಡಿಸಬೇಕು. ಅವರಿಂದ ಸಾಧ್ಯವಾಗದಿದ್ದರೇ, ಕಾನೂನು ಸಮರ ನಡೆಸುತ್ತೇನೆ ಎಂದು ಜಯಲಕ್ಷ್ಮಿ ಹೇಳಿದರು.

ಮತ್ತೊಂದು ಕಡೆ ತಮ್ಮ ಶಾಸಕ ಸ್ಥಾನಕ್ಕೆ ರೇಣುಕಾಚಾರ್ಯ ರಾಜೀನಾಮೆ ಸಲ್ಲಿಸಿದ್ದಾರೆ. ಒತ್ತಡಕ್ಕೆ ಮಣಿದ ಪೊಲೀಸರು ರೇಣುಕಾಚಾರ್ಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X