ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಐಶ್-ಅಭಿ ಮದ್ವೆಗೆ ಆಹ್ವಾನ ಪಡೆದ ಏಕೈಕ ಬೆಂಗಳೂರಿಗ!
ಬೆಂಗಳೂರು : ಐಶ್ವರ್ಯ-ಅಭಿ ಮದುವೆಗೆ ಆಹ್ವಾನ ಪಡೆದ ಏಕೈಕ ಬೆಂಗಳೂರಿಗ; ಚಂದ್ರಶೇಖರ ಸ್ವಾಮೀಜಿ!
ತಮ್ಮ ವಾಸ್ತು ಮತ್ತು ಭವಿಷ್ಯ ಪರಿಣತಿಯಿಂದ ಖ್ಯಾತನಾಮರ ಗಮನ ಸೆಳೆದಿರುವ, ಆರ್.ಟಿ.ನಗರದಲ್ಲಿರುವ ಚಂದ್ರಶೇಖರ ಸ್ವಾಮೀಜಿ, ದೊಡ್ಡ ಜನರ ಪಾಲಿಗೆ ರಾಜಗುರು! ಐಶ್ವರ್ಯ ಮತ್ತು ಅಭಿಷೇಕ್ ಜಾತಕ ಕುದುರಿಸಿ, ಮದುವೆ ದಿನ ನಿಗದಿಪಡಿಸಿದ್ದೇ, ಈ ಸ್ವಾಮಿ.
ಐಶ್ವರ್ಯ ಮದುವೆಗೆ ಮಂಗಳಸೂತ್ರ ಮತ್ತು ಕೆಲವು ಪೂಜಾ ಸಾಮಗ್ರಿಗಳನ್ನು ಸ್ವಾಮಿ, ಇಲ್ಲಿಂದಲೇ ತೆಗೆದುಕೊಂಡು ಗುರುವಾರ ರಾತ್ರಿಯೇ ವಿಮಾನ ಹತ್ತಿ ಮುಂಬೈ ತಲುಪಿದ್ದರು. ಬಚ್ಚನ್ ನಿವಾಸದಲ್ಲಿ ಕೆಲವು ಪೂಜೆಗಳನ್ನು ಮಾಡಿಸಿ, ಶುಕ್ರವಾರ ಬೆಳಗ್ಗೆ ತರಾತುರಿಯಲ್ಲಿ ಬೆಂಗಳೂರಿಗೆ ವಾಪಸ್ಸು ಬಂದರು. ಕಾರಣ; ಬೆಂಗಳೂರಿನಲ್ಲಿ ಸಹಸ್ರ ಚಂಡಿಕಾ ಯಾಗ.
ಅರಮನೆ ಮೈದಾನದಲ್ಲಿನ ಚಂಡಿಕಾಯಾಗಕ್ಕೆ ಚಾಲನೆ ನೀಡಿ, ಮತ್ತೆ ಮಧ್ಯಾಹ್ನದ ವೇಳೆಗೆ ಐಶ್-ಅಭಿ ಮದುವೆಗಾಗಿ ಮುಂಬೈಗೆ ವಿಮಾನದಲ್ಲಿ ತೆರಳಿದರು ಎಂದು ಮೂಲಗಳು ಹೇಳಿವೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, April 21, 2007, 5:30 [IST]