ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಆವರಣ’ದ ಭೈರಪ್ಪಗೆ ಎನ್‌ಟಿಆರ್‌ ರಾಷ್ಟ್ರೀಯ ಪ್ರಶಸ್ತಿ

By Staff
|
Google Oneindia Kannada News

S.L. Bhairappaಬೆಂಗಳೂರು : ಎನ್‌.ಟಿ.ರಾಮರಾವ್‌(ಎನ್‌ಟಿಆರ್‌) ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಆಯ್ಕೆಯಾಗಿದ್ದಾರೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹೆಸರಾಂತ ನಟ ದಿವಂಗತ ಎನ್‌.ಟಿ.ರಾಮರಾವ್‌ರ ಸಂಸ್ಮರಣೆಗಾಗಿ, ಅವರ ಪತ್ನಿ ಲಕ್ಷ್ಮೀ ಪಾರ್ವತಿ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ. ಎನ್‌ಟಿಆರ್‌ ವಿಜ್ಞಾನ ಟ್ರಸ್ಟ್‌ ಆಧ್ಯಕ್ಷೆಯೂ ಆಗಿರುವ ಅವರು, ಪ್ರಶಸ್ತಿ ಒಂದು ಲಕ್ಷ ರೂ. ನಗದು ಹಣವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

ಮೇ.28ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಎನ್‌ಟಿಆರ್‌ ಜಯಂತಿ ಸಮಾರಂಭದಲ್ಲಿ, ಭೈರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X