ತ್ವರಿತ ಅಲರ್ಟ್ ಗಳಿಗಾಗಿ
For Daily Alerts
15ದಿನದಲ್ಲಿ ಲೋಕಾಯುಕ್ತರಿಗೆ ಸುಪ್ರೀಂ ಪವರ್ : ಸಿಎಂ
ಬೆಂಗಳೂರು : ಹಲ್ಲಿಲ್ಲದ ಹಾವಾಗಿದ್ದ ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಈ ಬಗ್ಗೆ ಮಾತನಾಡುತ್ತಿದ್ದ ಅವರು, ಸಂಪುಟ ಉಪಸಮಿತಿ ಲೋಕಾಯುಕ್ತರಿಗೆ ಪರಮಾಧಿಕಾರ ನೀಡಲು ಸಮ್ಮತಿಸಿದೆ. ಮುಂದಿನ 15ದಿನಗಳಲ್ಲಿ ಈ ಸಂಬಂಧದ ಆದೇಶ ಹೊರಬೀಳಲಿದೆ. ಪರಮಾಧಿಕಾರ ದೊರೆತ ಮೇಲೆ ಮುಖ್ಯಮಂತ್ರಿ ವಿರುದ್ಧ ಸಹಾ, ಲೋಕಾಯುಕ್ತರು ಕ್ರಮಜರುಗಿಸಬಹುದು ಎಂದರು.
1986ರಿಂದಲೂ ಪರಮಾಧಿಕಾರದ ಪ್ರಸ್ತಾವನೆ ನೆನೆಗುದಿಗೆ ಬಿದ್ದಿತ್ತು. ಇದಕ್ಕೆ ಅಧಿಕಾರಿಗಳೇ ಕಾರಣ. ಭ್ರಷ್ಟರಿಗೆ ಕಡಿವಾಣ ಹಾಕಲು ಲೋಕಾಯುಕ್ತರ ಕೈ ಬಲಪಡಿಸುವುದು ಸದ್ಯದ ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.
ಗೇಲಿ : ಹಗ್ಗ ಕೊಟ್ಟು ಲೋಕಾಯುಕ್ತರಿಂದ ಮುಖ್ಯಮಂತ್ರಿಗಳು ಕೈಕಟ್ಟಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಅವರ ರಾಜಕೀಯ ವಿರೋಧಿಗಳು ಗೇಲಿ ಮಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, April 19, 2007, 5:30 [IST]