ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನರ್ಸ್ ಜಯಲಕ್ಷ್ಮಿ ಆತ್ಮಹತ್ಮೆ: ಹೊನ್ನಾಳಿ ಶಾಸಕರಿಗೆ ಸಂಕಷ್ಟ!
ಬೆಂಗಳೂರು : ಹೊನ್ನಾಳಿಯ ಬಿಜೆಪಿ ಶಾಸಕ ರೇಣುಕಾಚಾರ್ಯರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ ಎನ್ನಲಾದ ನರ್ಸ್ ಜಯಲಕ್ಷ್ಮಿ, ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ತನ್ನ ಮತ್ತು ರೇಣುಕಾಚಾರ್ಯರ ಬಗ್ಗೆ ವಾರಪತ್ರಿಕೆಯಾಂದರಲ್ಲಿ ಪ್ರಕಟವಾದ ವರದಿಯಿಂದ ಜಯಲಕ್ಷ್ಮೀ ನೊಂದಿದ್ದ ರು. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆಕೆಯ ಸಂಬಂಧಿಕರು ಅಭಿಪ್ರಾಯಪಟ್ಟಿದ್ದಾರೆ.
ಶೇಷಾದ್ರಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ರೈಲ್ವೆ ಪ್ಯಾರಲಲ್ ರಸ್ತೆಯ ಪಾರ್ಕಿಂಗ್ ಜಾಗದ ಬಳಿ, ತಮ್ಮ ಕಾರಿನಲ್ಲಿ ಜಯಲಕ್ಷ್ಮಿ ಮೆಟಾಸಿಟ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮಲ್ಲಿಗೆ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿರುವ ಜಯಲಕ್ಷ್ಮಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, April 18, 2007, 5:30 [IST]