ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲೋಕಾಯುಕ್ತ ಲಕ್ಷ್ಮಣರೇಖೆ : ಸಚಿವರಿಬ್ಬರ ತಲೆದಂಡ?
ಬೆಂಗಳೂರು : ತಮ್ಮ ಅಸ್ತಿ ವಿವರ ಸಲ್ಲಿಸಲು ವಿಳಂಬ ಮಾಡಿದ ಇಬ್ಬರು ಸಚಿವರು, ಮಂತ್ರಿಗಿರಿ ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಕೃಷಿ ಮಾರುಕಟ್ಟೆ ಸಚಿವ ಶರಣಬಸಪ್ಪ ದರ್ಶನಾಪುರ ಮತ್ತು ಯುವಜನ ಸೇವೆ ಮತ್ತು ಕ್ರೀಡಾಖಾತೆ ಸಚಿವ ಆಲ್ಕೋಡ್ ಹನುಮಂತಪ್ಪ , ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಸಲು ವಿಳಂಬ ಮಾಡಿದ ಸಚಿವರಾಗಿದ್ದಾರೆ. ಈ ಸಚಿವರ ವಿರುದ್ಧ ಕ್ರಮ ಜರುಗಿಸಲು ಲೋಕಾಯುಕ್ತರು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.
ಅನಿವಾರ್ಯ ಕಾರಣಗಳಿಂದ ತುಸು ವಿಳಂಬವಾಗಿದೆ. ಇದು ಉದ್ದೇಶಪೂರ್ವಕ ತಪ್ಪಲ್ಲ. ಒಂದು ವೇಳೆ, ರಾಜ್ಯಪಾಲರು ರಾಜೀನಾಮೆ ಬಯಸಿದರೆ, ಸ್ಥಾನ ತೊರೆಯಲು ಸಿದ್ಧ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.
ತಮ್ಮ ಆಸ್ತಿ ವಿವರ ಘೋಷಿಸುವಂತೆ ರಾಜ್ಯದ ಶಾಸಕರು ಮತ್ತು ಸಚಿವರಿಗೆ ಲೋಕಾಯುಕ್ತ ಸಂತೋಷ್ ಹೆಗಡೆ ಗಡುವು ನೀಡಿದ್ದರು. ಗಡುವು ಮೀರುವುದು ಕಾನೂನಿನ ಪ್ರಕಾರ ತಪ್ಪು,
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, April 16, 2007, 5:30 [IST]