ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿಕ್ಷಣ ಸಾಲವನ್ನು ಬ್ಯಾಂಕ್ ನಿರಾಕರಿಸುವಂತಿಲ್ಲ -ಚಿದಂಬರಂ
ಕೋಲಾರ : ಬ್ಯಾಂಕ್ಗಳಿರುವುದು ಎಲ್ಲರ ಕಲ್ಯಾಣಕ್ಕಾಗಿ. ವಿದ್ಯಾರ್ಥಿಗಳು ಶೈಕ್ಷಣಿಕ ಸಾಲದ ಲಾಭ ಪಡೆದು, ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಬೇಕೆಂದು ಕೇಂದ್ರ ಹಣಕಾಸು ಸಚಿವರು ಕರೆ ನೀಡಿದರು.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಗ್ರಾಮೀಣ ವಿದ್ಯಾರ್ಥಿಗಳು ಹಣಕಾಸಿನ ತೊಂದರೆಯಿಂದ, ಶಿಕ್ಷಣಕ್ಕೆ ವಿದಾಯ ಹೇಳಬಾರದು. ವೈದ್ಯಕೀಯ, ಇಂಜಿನಿಯರಿಂಗ್, ಎಂಬಿಎ -ಹೀಗೆ ಯಾವುದೇ ಇರಲಿ, ಬ್ಯಾಂಕ್ಗಳಿಂದ ಆರ್ಥಿಕ ನೆರವು ಪಡೆದು, ವಿದ್ಯಾಭ್ಯಾಸವನ್ನು ಮುಂದುವರೆಸಬೇಕು ಎಂದರು.
ಶೈಕ್ಷಣಿಕ ಉದ್ದೇಶಕ್ಕೆ ಅರ್ಹ ವಿದ್ಯಾರ್ಥಿಗೆ ಬ್ಯಾಂಕ್ಗಳು ಸಾಲ ನಿರಾಕರಿಸುವಂತಿಲ್ಲ. ಪ್ರಸ್ತುತ 9ಲಕ್ಷ ವಿದ್ಯಾರ್ಥಿಗಳು ಸಾಲ ಪಡೆದಿದ್ದಾರೆ ಎಂದು ಸಚಿವರು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, April 16, 2007, 5:30 [IST]