ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಿತ್ರದುರ್ಗ: ಗುರಿ ಮುಟ್ಟುವ ಮೊದಲೇ ಕೈಕೊಟ್ಟ ಹೃದಯ
ಚಿತ್ರದುರ್ಗ : ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಸ್.ಎಂ.ಪತ್ತಾರ್ ತೀವ್ರ ಹೃದಯಾಘಾತಕ್ಕೀಡಾಗಿ ಕ್ರೀಡಾಂಗಣದಲ್ಲೇ ಸಾವನ್ನಪ್ಪಿದ್ದಾರೆ.
ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಭಾನುವಾರ(ಏಪ್ರಿಲ್ 15) ಈ ದುರ್ಘಟನೆ ನಡೆದಿದೆ. 1,000ಮೀಟರ್ ಓಟದ ಕೊನೆಯ ಸುತ್ತನ್ನು ಇನ್ನೇನು ಪೂರ್ಣಗೊಳಿಸಿದರು ಎನ್ನುವಷ್ಟರಲ್ಲಿ ಹೃದಯಾಘಾತಕ್ಕೊಳಗಾದ ಅವರು ಕುಸಿದುಬಿದ್ದು ಪ್ರಾಣಬಿಟ್ಟರು.
ಧಾರವಾಡದ ಪತ್ತಾರ್ ಇದೇ ಕ್ರೀಡಾಕೂಟದ 5,000 ಮೀಟರ್ ಓಟದಲ್ಲಿ ಎರಡನೇ ಸ್ಥಾನ ಪಡೆದಿದ್ದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, April 16, 2007, 5:30 [IST]