ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಚಿವ ಚೆನ್ನಿಗಪ್ಪ ದೇವೇಗೌಡರ ಕಾಲಿಗೆ ಬಿದ್ದಿದ್ದೇಕೆ...?
ತುಮಕೂರು : ಡಾ.ಓ.ಅನಂತರಾಮಯ್ಯ ಅವರನ್ನು ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ನೇಮಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪಾದಗಳಿಗೆ ಎರಗಿದ್ದೆ ಎಂದು ಸಚಿವ ಸಿ.ಚೆನ್ನಿಗಪ್ಪ ಹೇಳಿದ್ದಾರೆ.
ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.
ದಲಿತರು, ಹಿಂದುಳಿದ ವರ್ಗಗಳು ಹಾಗೂ ದಮನಿತರ ಪರವಾಗಿ ತಮ್ಮ ಕಾಳಜಿ ವ್ಯಕ್ತಪಡಿಸಿದ ಅವರು, ಅನಂತರಾಮಯ್ಯನವರನ್ನು ನಾನು ದೇವೇಗೌಡರ ಬಳಿಗೆ ಕರೆದುಕೊಂಡು ಹೋಗಿದ್ದೆ. ಅವರನ್ನೇ ಉಪಕುಲಪತಿಗಳನ್ನಾಗಿ ಮಾಡಿ ಎಂದು ದೇವೇಗೌಡರ ಪಾದಗಳಿಗೆ ಎರಗಿ ವಿನಂತಿ ಮಾಡಿಕೊಂಡೆ.
ದಲಿತರ ಪರ ನನಗಿರುವ ಕಾಳಜಿ ಕುರಿತು ಹೆಚ್ಚಿಗೆ ಹೇಳಲಾರೆ. ನನಗೆ ಯಾವುದೇ ಜಾತಿಯಿಲ್ಲ. ನನ್ನ ದೃಷ್ಟಿಯಲ್ಲಿ ಮನುಷ್ಯಜಾತಿಯೆಲ್ಲ ಒಂದೇ ಎಂದು ಅಭಿಪ್ರಾಯಪಟ್ಟರು.
ನನಗೆ ಪಕ್ಷ ರಾಜಕೀಯದ ಮಿತಿಗಳೂ ಗೊತ್ತು ಎಂದ ಅವರು, ಪ್ರೀತಿ ಮತ್ತು ಅನುಕಂಪಗಳು ಮಾತ್ರ ಉಳಿಯುತ್ತವೆ; ಶಕ್ತಿ ರಾಜಕಾರಣ ಉಳಿಯದು ಎಂದು ಹೇಳಿದರು.
(ಏಜನ್ಸೀಸ್)
Comments
Story first published: Sunday, April 15, 2007, 5:30 [IST]