ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚನ್ನಪಟ್ಟಣ ಬಳಿ ಭೀಕರ ರಸ್ತೆ ಅಪಘಾತ : 6ಜನರ ಸಾವು

By Staff
|
Google Oneindia Kannada News

ಚನ್ನಪಟ್ಟಣ : ಟಾಟಾ ಸುಮೋ-ಖಾಸಗಿ ಬಸ್‌ ಪರಸ್ಪರ ಡಿಕ್ಕಿಹೊಡೆದ ಪರಿಣಾಮ ಟಾಟಾ ಸುಮೋದಲ್ಲಿದ್ದ 6 ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ, ಮೈಸೂರು-ಬೆಂಗಳೂರು ರಸ್ತೆಯ ಮುದುಗೆರೆ ಗೇಟ್‌ ಬಳಿ ಭಾನುವಾರ ಸಂಭವಿಸಿದೆ.

ಬೆಂಗಳೂರಿನಿಂದ ಮೈಸೂರಿನತ್ತ ಹೊರಟಿದ್ದ ಸುಮೋ ವಾಹನದ ಎದುರಿಗೆ ನಾಯಿಯಾಂದು ಅಡ್ಡ ಬಂದಿದೆ. ನಾಯಿಯನ್ನು ಉಳಿಸಲು ಚಾಲಕ ತಕ್ಷಣವೇ ಬಲಕ್ಕೆ ತಿರುಗಿಸಿದಾಗ ಸುಮೋ ರಸ್ತೆ ವಿಭಜಕ ದಾಟಿದೆ. ಆಗ ತಕ್ಷಣವೇ ಎದುರಿಗೆ ಬಂದ ಖಾಸಗಿ ಬಸ್‌ ಸುಮೋಗೆ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಸುಮೋ ನಜ್ಜುಗುಜ್ಜಾಗ್ದಿದು, ಖಾಸಗಿ ಬಸ್‌ ಜಖಂಗೊಂಡಿದೆ. ಮೃತದೇಹಗಳು ಗುರುತು ಸಿಗಲಾರದಷ್ಟು ಜಜ್ಜಿಹೋಗಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಬೆಂಗಳೂರಿನವರೆಂದು ತಿಳಿದುಬಂದಿದೆ. ಅಪಘಾತ ನಡೆದ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದರು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X