ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಟ್ವೆಂಟಿ20 ಕ್ರಿಕೆಟ್: ಕರ್ನಾಟಕ ತಂಡದಿ ದ್ರಾವಿಡ್, ಉತ್ತಪ್ಪ
ಬೆಂಗಳೂರು : ಅಖಿಲ ಭಾರತ ಟ್ವೆಂಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ, ಭಾರತ ಕ್ರಿಕೆಟ್ ತಂಡದ ನಾಯಕ ರಾಹುಲ್ ದ್ರಾವಿಡ್ ಕರ್ನಾಟಕ ತಂಡದ ಪರವಾಗಿ ಆಡಲಿದ್ದಾರೆ.
ಏಪ್ರಿಲ್ 15ರಿಂದ 20ರವರೆಗೆ ಮುಂಬಯಿನಲ್ಲಿ ನಡೆಯಲಿರುವ ಈ ಪಂದ್ಯಾವಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟುಗಾರ ಯರೇಗೌಡ ತಂಡವನ್ನು ಮುನ್ನಡೆಸಲಿದ್ದಾರೆ.
ತಂಡ ಇಂತಿದೆ :
ಯರೇಗೌಡ(ನಾಯಕ), ರಾಹುಲ್ ದ್ರಾವಿಡ್, ರಾಬಿನ್ ಉತ್ತಪ್ಪ, ದೇವರಾಜ್ ಟಿ. ಪಾಟೀಲ್, ಸಿ.ರಘು, ವಿ.ಎಸ್.ತಿಲಕ್ನಾಯ್ಡು(ವಿಕೆಟ್ ಕೀಪರ್), ಬಿ.ಅಖಿಲ್, ಸುನೀಲ್ ಬಿ.ಜೋಷಿ, ರಾಜು ಭಟ್ಕಳ, ದೀಪಕ್ ಚೌಗುಲೆ, ಎಸ್.ಅರವಿಂದ್, ಅಮಿತ್ ವರ್ಮಾ, ಮನೀಶ್ ಪಾಂಡೆ, ಕೆ.ಪಿ.ಅಪ್ಪಣ್ಣ, ಮೊಹಮ್ಮದ್ ಆರಿಫ್ ಮತ್ತು ಆರ್.ವಿನಯ್ಕುಮಾರ್.
ತರಬೇತುದಾರ : ಬಿ.ಕೆ.ವೆಂಕಟೇಶ್ಪ್ರಸಾದ್, ಫಿಜಿಯೋ : ರಮಾಕಾಂತ್, ವ್ಯವಸ್ಥಾಪಕ : ರಘುರಾಂ ಭಟ್
(ದಟ್ಸ್ ಕನ್ನಡ ವಾರ್ತೆ)
Story first published: Saturday, April 14, 2007, 5:30 [IST]