ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಈ ಭಾನುವಾರ ಶಿವಮೊಗ್ಗ ಜಿಲ್ಲಾ ಪತ್ರಕರ್ತರ ಆಟ-ಕೂಟ
ಶಿವಮೊಗ್ಗ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಏಪ್ರಿಲ್ 15ರಂದು ಪತ್ರಕರ್ತರ ಕ್ರೀಡಾಕೂಟ ನಡೆಯಲಿದೆ.
ಜಲಸಂಪನ್ಮೂಲ ಸಚಿವ ಕೆ.ಎಸ್.ಈಶ್ವರಪ್ಪ ಕ್ರೀಡಾಕೂಟ ಉದ್ಘಾಟಿಸಲಿದ್ದು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ರಾಜಕೀಯ ಮುಖಂಡರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದ್ದು, 100ಮೀಟರ್ ಓಟ, 400ಮೀಟರ್ ನಡಿಗೆ, ಶಾಟ್ಪುಟ್, ಕ್ರಿಕೆಟ್ ಮೊದಲಾದ ಆಟಗಳಲ್ಲಿ ಪತ್ರಕರ್ತರು ಭಾಗವಹಿಸಲಿದ್ದಾರೆ.
ಕ್ರಿಕೆಟ್, ಕಬಡ್ಡಿ ಮೊದಲಾದ ಗುಂಪು ಕ್ರೀಡೆಗಳಲ್ಲಿ, ಗ್ರಾಮೀಣ ಪತ್ರಕರ್ತರು ಹಾಗೂ ನಗರ ಪತ್ರಕರ್ತರು ಪ್ರತ್ಯೇಕ ತಂಡಗಳಾಗಿ ಸೆಣಸಲಿದ್ದಾರೆ. ಉಳಿದ ಆಟಗಳಿಗಾಗಿ, 35ವರ್ಷದೊಳಗಿನವರ ತಂಡ, 35ರಿಂದ 50ವರ್ಷದೊಳಗಿನವರ ತಂಡ ಹಾಗೂ 50ವರ್ಷ ಮೇಲ್ಪಟ್ಟವರ ತಂಡ ಎಂದು ಮೂರು ಬಗೆಯಲ್ಲಿ ವಿಂಗಡಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, April 14, 2007, 5:30 [IST]