ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡಿಸಿ ಕಂಗೆಡಿಸಿ ಗುಂಡಿಗೆ ಎದೆಯಾಡ್ಡಿದ ಚಿರತೆರಾಯ!

By Staff
|
Google Oneindia Kannada News

ಪಿರಿಯಾಪಟ್ಟಣ : ತಾಲ್ಲೂಕಿನ ಎನ್‌.ಶೆಟ್ಟಿಹಳ್ಳಿ ಗ್ರಾಮದಲ್ಲಿ ದಿಢೀರನೇ ಪ್ರತ್ಯಕ್ಷವಾದ ಚಿರತೆಯಾಂದು ನಾಲ್ವರ ಮೇಲೆ ದಾಳಿ ನಡೆಸಿದೆ. ಆನಂತರ ಅರಣ್ಯ ಹಾಗೂ ಪೊಲೀಸ್‌ ಅಧಿಕಾರಿಗಳ ಗುಂಡಿಗೆ ಬಲಿಯಾಗಿದೆ.

ಗ್ರಾಮ ಪ್ರವೇಶ ಮಾಡಿದ್ದ ಚಿರತೆ, ಗ್ರಾಮಸ್ಥರ ಕಂಗಾಲುಗೊಳಿಸಿತ್ತು. ತಾನು ಸಾಗಿದ ದಾರಿಯಲ್ಲಿ ಎದುರಾದ ನಾಲ್ವರ ಮೇಲೆ ದಾಳಿ ಮಾಡಿತ್ತು. ಈ ಸುದ್ದಿ ತಿಳಿದ ತಕ್ಷಣ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು. ಚಿರತೆಯನ್ನು ಜೀವಂತವಾಗಿ ಹಿಡಿಯಲು ಮಂಗಳವಾರ ಸಂಜೆ ತನಕ ಪರದಾಡಿದರು. ಎಲ್ಲಾ ಉಪಾಯಗಳನ್ನು ಚಿರತೆರಾಯ ಹಾಳು ಮಾಡಿದ!

ಜೀವಂತವಾಗಿ ಚಿರತೆರಾಯನ ಹಿಡಿಯುವ ಎಲ್ಲ ಯತ್ನಗಳೂ ವಿಫಲವಾದಾಗ, ಗುಂಡುಹಾರಿಸಿ ಕೊಲ್ಲಲಾಯಿತು. ಓರ್ವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಇತರ ಮೂವರು ಚಿರತೆ ದಾಳಿಯಿಂದ ಗಾಯಗೊಂಡಿದ್ದಾರೆಂದು ಮೂಲಗಳು ಹೇಳಿವೆ.

ಕಾಡು ಮೇಡಲ್ಲಿ ಆಹಾರದ ಕೊರತೆಯಾದಾಗ, ಆಗಾಗ ಚಿರತೆಗಳು ಸಮೀಪದ ಊರುಗಳಿಗೆ ಬರುವ ಪರಿಪಾಟ ರಾಜ್ಯದ ಕೆಲವೆಡೆ ಇದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X