For Daily Alerts
ಗುರುವಾರ ಮಧ್ಯರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
ಬೆಂಗಳೂರು : ಪೆಟ್ರೋಲ್ ಡೀಲರುಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ(ಏ.13) ದೇಶವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಏಪ್ರಿಲ್ 12ರ ಮಧ್ಯರಾತ್ರಿಯಿಂದ ಏ.13ರ ಮಧ್ಯರಾತ್ರಿವರೆಗೆ ಪೆಟ್ರೋಲ್ ಬಂಕ್ಗಳು ಕಾರ್ಯನಿರ್ವಹಿಸುವುದಿಲ್ಲ. ಈ ಬಗ್ಗೆ ವಿವರ ನೀಡಿರುವ ಬೆಂಗಳೂರು ಪೆಟ್ರೋಲಿಯಂ ಡೀಲರುಗಳ ಸಂಘದ ಉಪಾಧ್ಯಕ್ಷ ಬಿ.ಆರ್.ರವೀಂದ್ರನಾಥ್, ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ.
ಕಮೀಷನ್ ಹೆಚ್ಚಳ(ಶೇ.1.75ರಿಂದ ಶೇ.5), ಇಂಧನ ಪರೀಕ್ಷಿಸುವ ಉಪಕರಣ ಪೂರೈಕೆ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
(ಏಜನ್ಸೀಸ್)
Story first published: Tuesday, April 10, 2007, 5:30 [IST]