ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆಯಲ್ಲಿ ಬಿಜೆಪಿಯ ‘ವಿಕಾಸಯಾತ್ರೆ’ಗೆ ಚಾಲನೆ

By Staff
|
Google Oneindia Kannada News

ದಾವಣಗೆರೆ : ಭಾರತೀಯ ಜನತಾ ಪಕ್ಷದ ‘ವಿಕಾಸಯಾತ್ರೆ’ಗೆ ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ಚಾಲನೆ ನೀಡಿದ್ದಾರೆ.

ಸೋಮವಾರ(ಏಪ್ರಿಲ್‌ 9) ಈ ಕುರಿತ ಸಮಾರಂಭದಲ್ಲಿ ಮಾತನಾಡಿದ ಸದಾನಂದಗೌಡ, ಕೆಳಹಂತದಿಂದ ಪಕ್ಷವನ್ನು ಬಲಗೊಳಿಸುವುದು ಹಾಗೂ ಬಿಜೆಪಿ-ಜೆಡಿಎಸ್‌ ಮೈತ್ರಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಯಾತ್ರೆಯ ಗುರಿ. ರಾಜ್ಯಾದ್ಯಂತ ಮೂರು ಹಂತದಲ್ಲಿ ಒಟ್ಟು 15ದಿನಗಳ ಕಾಲ ಯಾತ್ರೆ ನಡೆಯಲಿದೆ ಎಂದು ಅವರು ವಿವರಿಸಿದರು.

ಆರೋಗ್ಯ ಸಚಿವ ಆರ್‌.ಅಶೋಕ್‌ ಹೊರತುಪಡಿಸಿ ಭಾರತೀಯ ಜನತಾ ಪಕ್ಷದ ಎಲ್ಲ ಸಚಿವರೂ ಸಮಾರಂಭದಲ್ಲಿ ಹಾಜರಿದ್ದರು. ಏಪ್ರಿಲ್‌ 24ರಂದು ಉಡುಪಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X