ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಇಬ್ಬರು ನಕ್ಸಲರು ಪರಾರಿ
ಚಿಕ್ಕಮಗಳೂರು: ನಕ್ಸಲ್ ನಿಗ್ರಹ ದಳದ ಸುಳಿವು ತಿಳಿದುಕೊಂಡ ಇಬ್ಬರು ನಕ್ಸಲರು ಚಿಕ್ಕಮಗಳೂರು ಜಿಲ್ಲೆ ನಾಗಸಂಪಿಗೆ ಬೆಟ್ಟ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡಿದ್ದಾರೆ.
ನಾಗಸಂಪಿಗೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ನಡೆಸಿದ ಜಂಟಿ ಕಾರ್ಯಾಚರಣೆಯಿಂದ ಎರಡು ನಾಡ ಬಂದೂಕುಗಳು, ಎರಡು ಬ್ಯಾಟರಿ ಟಾರ್ಚುಗಳು ಹಾಗೂ ಸಾಕಷ್ಟು ಕರಪತ್ರಗಳು ಸಿಕ್ಕಿವೆ. ಆದರೆ ಕಾರ್ಯಾಚರಣೆಯ ಸುಳಿವು ಹತ್ತಿ ನಕ್ಸಲರು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಭಾನುವಾರ ರಾತ್ರಿಯಿಡಿ ನಡೆದ ಕಾರ್ಯಾಚರಣೆ ಸೋಮವಾರ(ಏಪ್ರಿಲ್ 09) ಕೂಡ ಮುಂದುವರೆದಿದೆ. ಈ ಅರಣ್ಯ ಪ್ರದೇಶಕ್ಕೆ ಹತ್ತಿರ ಗ್ರಾಮ ಅಂಚನಗುಡಿಯಲ್ಲಿನ ಸರ್ಕಾರಿ ಶಾಲೆಯ ಹತ್ತಿರ ನಕ್ಸಲರನ್ನು ಬೆಂಬಲಿಸುವ ಕರಪತ್ರಗಳು ಲಭಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
(ಏಜನ್ಸೀಸ್)
Comments
Story first published: Monday, April 9, 2007, 5:30 [IST]