ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿಗಳಿಂದ ಗುರುವಂದನೆಗೆ ಅದ್ದೂರಿ ಚಾಲನೆ

By Staff
|
Google Oneindia Kannada News

Sidhaganga seer to receive guruvandane from devoteesತುಮಕೂರು: ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರ ಜನ್ಮ ಶತಮಾನೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಎಪಿಜೆ ಅಬ್ದುಲ್‌ಕಲಾಂ ಅವರು ಚಾಲನೆ ನೀಡಿದರು.

ಸಿದ್ದಗಂಗಾ ಮಠದ ಆವರಣದಲ್ಲಿ ಅಪಾರ ಜನಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮದ ಸಮ್ಮುಖದಲ್ಲಿ ಗುರುವಂದನೆ ಕಾರ್ಯಕ್ರಮ ವಿದ್ಯುಕ್ತವಾಗಿ ಆರಂಭಗೊಂಡಿತು. ಏಪ್ರಿಲ್‌ 08 ಹಾಗೂ 09 ರಂದು ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾಧಿಗಳ ಸೇವೆಗಾಗಿ ಶ್ರೀ ಮಠದ ಹಳೆಯ ವಿದ್ಯಾರ್ಥಿಗಳು, ಎನ್‌ಎಸ್‌ಎಸ್‌ ಕಾರ್ಯಕರ್ತರು ಮುಂತಾದವರ ಬೃಹತ್‌ ಸ್ವಯಂ ಸೇವಕರ ಕಾರ್ಯಪಡೆ ಸಜ್ಜಾಗಿದೆ.

ಎಲ್ಲೆಡೆ ಹಬ್ಬದ ಸಂಭ್ರಮ:

ನಗರದ ಎಲ್ಲೆಡೆ ತಳಿರು ತೋರಣಗಳು, ಸ್ವಾಗತ ಕೋರುವ ಕಮಾನುಗಳು, ಶುಭ ಕೋರುವ ಬ್ಯಾನರ್‌ಗಳು ಕಂಗೊಳಿಸುತ್ತಿವೆ. ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 35 ಸಾವಿರಕ್ಕೂ ಅಧಿಕ ಜನಕ್ಕೆ ಆಸನದ ವ್ಯವಸ್ಥೆಮಾಡಲಾಗಿದೆ. ಲಕ್ಷಕ್ಕೂ ಅಧಿಕ ಜನರ ಜಮಾವಣೆ ಆಗಿದೆ. ಗುರುವಂದನೆ ಕಾರ್ಯಕ್ರಮವನ್ನು ವೀಕ್ಷಿಸಲು ಅನುಕೂಲವಾಗುವಂತೆ ಅಲ್ಲಲ್ಲಿ ಪೆಂಡಾಲ್‌ಗಳನ್ನು ಹಾಕಲಾಗಿದ್ದು, ಬೃಹತ್‌ ಪರದೆಯನ್ನು ಅಳವಡಿಸಲಾಗಿದೆ. ಸ್ವಾಮೀಜಿಗಳ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಎಲ್ಲರಿಗೂ ಸಿಹಿ ಹಂಚಲಾಗುತ್ತಿದೆ. ಈ ಎಲ್ಲಾ ವ್ಯವಸ್ಥೆಯ ಉಸ್ತುವಾರಿಕೆಯನ್ನು ಸ್ವತಃ ಸ್ವಾಮೀಜಿ ಅವರೇ ವಹಿಸಿದ್ದು ವಿಶೇಷ ಹಾಗೂ ಅನುಕರಣೀಯ.

ಗಣ್ಯರ ಬೃಹತ್‌ ಪಡೆ:

ಶ್ರೀಗಳನ್ನು ಹರಸಲು, ಅವರಿಗೆ ಗುರುವಂದನೆ ಸಲ್ಲಿಸಲು ಉಪಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರುಗಳು ಹಾಜರಿದ್ದರು. ಶ್ರೀಗಳಿಗೆ ಭಾರತ ರತ್ನ ದ ಗೌರವ ನೀಡಬೇಕೆಂದು ಯಡಿಯೂರಪ್ಪ ರಾಷ್ಟ್ರಪತಿಗಳಲ್ಲಿ ಮನವಿ ಮಾಡಿದರು.

ರಾಷ್ಟ್ರಪತಿ ಕಲಾಂ ಅವರು ಶ್ರೀಗಳ ಸಾಧನೆಯನ್ನು ಹೊಗಳಿ, ಶ್ರೀಗಳದ್ದು ಎಲ್ಲರಿಗೂ ಆದರ್ಶವಾದ ಜೀವನ ಎಂದು ಹೇಳಿದರು. ಮುಖ್ಯಮಂತ್ರಿ ಹೆಚ್‌ .ಡಿ ಕುಮಾರ ಸ್ವಾಮಿ, ಎಂಪಿ ಪ್ರಕಾಶ್‌ , ವಿ ,ಸೋಮಣ್ಣ, ಪ್ರತಿ ಪಕ್ಷದ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಸಭೆಯ ಉಪ ಸಭಾಪತಿ ರೆಹಮಾನ್‌ ಖಾನ್‌ ಸೇರಿದಂತೆ ಅನೇಕರು ಗುರುವಿಗೆ ನಮನ ಸಲ್ಲಿಸಲು ನೆರೆದಿದ್ದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X