ತ್ವರಿತ ಅಲರ್ಟ್ ಗಳಿಗಾಗಿ
For Daily Alerts
2006ನೇ ಸಾಲಿನಲ್ಲಿ 14 ಜನಕ್ಕೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಬೆಂಗಳೂರು: ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿರುವ 14 ಜನ ಗಣ್ಯರಿಗೆ 2006ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಲಿದೆ.
ವಿ.ಎನ್ ಸುಬ್ಬರಾವ್ ನೇತೃತ್ವದಲ್ಲಿ ಮಾಧ್ಯಮ ಅಕಾಡೆಮಿಯ ಸರ್ವಸದಸ್ಯರ ಸಮಿತಿ ಪತ್ರಕರ್ತರನ್ನು ಆರಿಸಿದರುಇಂಡಿಯಾ ಟುಡೇ ಆಂಗ್ಲ ವಾರಪತ್ರಿಕೆಯ ಸಂಪಾದಕ ರಾಜ್ ಚೆಂಗಪ್ಪ ಅವರಿಗೆ ವಿಶೇಷ ಪ್ರಶಸ್ತಿ ಲಭಿಸಿದೆ. ಇವರಿಗೆ 15,000 ರೂ ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಮೇ 10 ಕ್ಕೆ ಎಂದು ನಿಗದಿಯಾಗಿದೆ.
ಪ್ರಶಸ್ತಿಗೆ
ಆಯ್ಕೆಯಾದವರ
ಪಟ್ಟಿ
ಇಂತಿದೆ:
- ಈಶ್ವರ ದೈತೋಟ-ಸಂಯುಕ್ತ ಕರ್ನಾಟಕ- ಬೆಂಗಳೂರು
- ಗೌಸ್ ಶಿರಹಟ್ಟಿ -ಆಕಾಶವಾಣಿಯ ನಿವೃತ್ತ ನಿರ್ದೇಶಕರು
- ಸಂಧ್ಯಾ ಪೈ-ತರಂಗ ವಾರಪತ್ರಿಕೆ -ಮಣಿಪಾಲ್
- ಎಂ.ಎ. ಪೊನ್ನಪ್ಪ -ಪ್ರಜಾವಾಣಿ- ಬೆಂಗಳೂರು
- ಟಿ. ವೆಂಕಟೇಶ್-ಈ ಸಂಜೆ- ಬೆಂಗಳೂರು
- ಸಿ.ಷಣ್ಮುಗಪ್ಪ -ಕನ್ನಡಪ್ರಭ -ಚಿತ್ರದುರ್ಗ
- ರಾಮ್ ಮನಗೋಳಿ- ಸಂಯುಕ್ತ ಕರ್ನಾಟಕ- ಬಾಗಲಕೋಟೆ
- ಬಿ ಎಸ್ ಹರೀಶ್ -ಟೈಮ್ಸ್ ಆಫ್ ಇಂಡಿಯಾ -ಕನ್ನಡ -ಬೆಂಗಳೂರು
- ಹೆಚ್. ಸೀತಾರಾಮ ಹೆಗಡೆ- ಸಹಚರ , ಸಿರಸಿ
- ಶಿವಾನಂದ ಜೋಷಿ- ಸ್ವತಂತ್ರ ವರದಿಗಾರರು, ಹುಬ್ಬಳ್ಳಿ
- ಪ್ರಮೋದ್ ಮೆಳ್ಳಿಗಟ್ಟಿ- ದಿ ಹಿಂದೂ
- ಕೋಟೆ ನಾಗಭೂಷಣ-ಪ್ರಜಾ ಪ್ರಗತಿ, ತುಮಕೂರು
- ಕನ್ನಡಪ್ರಭ-ಏಪ್ರಿಲ್ 13 ,2006 ರ ಮತ್ತೆ ಹುಟ್ಟಿ ಬಾ ಡಾ. ರಾಜ್ ನಿಧನ ಸಂಚಿಕೆ
- ಸುದ್ದಿ ಚಿತ್ರ -ಪ್ರಜಾವಾಣಿಯ ಎಂ.ಆರ್ .ಮಂಜುನಾಥ್ -ಹೇಸಿಗೆ ಮಡ್ಡಿ ಸ್ಥಳಾಂತರಿಸಿ ಚಿತ್ರ
- ಸಾಮಾಜಿ ಕ ಕಳಕಳಿ ವರದಿ -ವಿಜಯಕರ್ನಾಟಕ- ಫ್ಲೋರೈಡ್ ಪೆಡಂಭೂತಕ್ಕೆ ಜಿಲ್ಲೆಯ ತಲ್ಲಣ- ಗುಲ್ಭರ್ಗದ ಜಯತೀರ್ಥ ಪಾಟೀಲ
- ಅಪರಾಧ ವರದಿ-ಕನ್ನಡಪ್ರಭ- ಗಾಣಿಗಪುರ ದುರಂತ ವರದಿ-ಶೇಷಮೂರ್ತಿ ಅವಧಾನಿ
- ವ್ಯಂಗ್ಯಚಿತ್ರ-ಪ್ರಜಾವಾಣಿ-ಯತಿಸಿದ್ದಕಟ್ಟೆ
- ತನಿಖಾ ವರದಿ- ಕೊಡಗಿನ ಶಕ್ತಿ ಪತ್ರಿಕೆ- ಟಿಬ್ಬೆಟ್ಟಿಯನ್ನರನ್ನು ಅರಬ್ಗೆ ಮಾರಾಟ- ವನಿತಾ ಚಂದ್ರಮೋಹನ್
- ಕ್ರೀಡಾ ವರದಿ-ಪ್ರಜಾವಾಣಿ- ಓಂಕಾರ ಮೂರ್ತಿ
- ಉದಯಟಿವಿಯ ಮಂಡ್ಯ ವರದಿಗಾರ ಬದ್ರುದ್ದೀನ್ - ಅಂಗವಿಕಲರ ಬದುಕು
- ನಿರೂಪಣೆ- ಬೆಳಗು -ದೂರದರ್ಶನ- ಶಿವರಾಂ
- ಸುದ್ದಿವಾಚಕ-ಟಿವಿ9ನ ಹಮೀದ್ಡ ಪಾಳ್ಯ ಪಾಲಾಗಿದೆ.
ಇ-ಮಾಧ್ಯಮ :
Comments
Story first published: Sunday, April 8, 2007, 5:30 [IST]