ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಏಪ್ರಿಲ್ 10 ರಿಂದ ಆಕಾಶವಾಣಿಯಲ್ಲಿ ಅಮೃತ ಸಂಪದ
ಬೆಂಗಳೂರು : ಬೆಂಗಳೂರು ಆಕಾಶವಾಣಿ ಕೇಂದ್ರವು ಔಷಧೀಯ ಸಸ್ಯಗಳನ್ನು ಪರಿಚಯಿಸುವ ನೂತನ ಕಾರ್ಯಕ್ರಮ ಅಮೃತ ಸಂಪದ ವನ್ನು ಏಪ್ರಿಲ್ 1 0 ರಿಂದ ಪ್ರಸಾರ ಮಾಡಲಿದೆ.
30 ನಿಮಿಷಗಳ ಈ ಕಾರ್ಯಕ್ರಮ ಏಪ್ರಿಲ್ 18ರವರೆಗೂ ಪ್ರಸಾರವಾಗಲಿದೆ. ಮನೆಯಂಗಳದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವ ಬಗೆ, ಈ ಸಸ್ಯಗಳನ್ನು ವಾಣಿಜ್ಯ ಉಪಯೋಗಕ್ಕೆ ಹೇಗೆ ತಿರುಗಿಸುವುದು, ಔಷಧೀಯ ಸಸ್ಯಗಳು ಲಭ್ಯವಿರುವ ಸ್ಥಳ ಮುಂತಾದ ವಿಷಯಗಳ ಮೇಲೆ ಮಾತುಕತೆ ಇರುತ್ತದೆ.
ಪ್ರತಿ ಮಂಗಳವಾರ 2:35 ರಿಂದ 3: 05 ರವರೆಗೂ ಬಿತ್ತರಗೊಳ್ಳುವ ಈ ಕಾರ್ಯಕ್ರಮದಲ್ಲಿ ಸಸ್ಯ ಶಾಸ್ತ್ರ ದ ವಿಶೇಷ ತಜ್ಞರು, ಆಯುರ್ವೇದ ವೈದ್ಯರುಗಳು ಶೋತ್ರುಗಳ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ ಹಾಗೂ ಔಷಧೀಯ ಸಸ್ಯಗಳಿಂದ ಯಾವ ಯಾವ ಕಾಯಿಲೆಗಳನ್ನು ದೂರಾಗಿಸಬಹುದು ಎನ್ನುವುದನ್ನು ವಿವರಿಸಲಿದ್ದಾರೆ. ಕೇಳುಗರು ತಮ್ಮ ಪ್ರಶ್ನೆಗಳನ್ನು ನಿಲಯದ ನಿರ್ದೇಶಕರು, ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಕಳಿಸಬಹುದು.
(ಯುಎನ್ಐ)
Story first published: Sunday, April 8, 2007, 5:30 [IST]