ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್‌ 10 ರಿಂದ ಆಕಾಶವಾಣಿಯಲ್ಲಿ ಅಮೃತ ಸಂಪದ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರು ಆಕಾಶವಾಣಿ ಕೇಂದ್ರವು ಔಷಧೀಯ ಸಸ್ಯಗಳನ್ನು ಪರಿಚಯಿಸುವ ನೂತನ ಕಾರ್ಯಕ್ರಮ ಅಮೃತ ಸಂಪದ ವನ್ನು ಏಪ್ರಿಲ್‌ 1 0 ರಿಂದ ಪ್ರಸಾರ ಮಾಡಲಿದೆ.

30 ನಿಮಿಷಗಳ ಈ ಕಾರ್ಯಕ್ರಮ ಏಪ್ರಿಲ್‌ 18ರವರೆಗೂ ಪ್ರಸಾರವಾಗಲಿದೆ. ಮನೆಯಂಗಳದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವ ಬಗೆ, ಈ ಸಸ್ಯಗಳನ್ನು ವಾಣಿಜ್ಯ ಉಪಯೋಗಕ್ಕೆ ಹೇಗೆ ತಿರುಗಿಸುವುದು, ಔಷಧೀಯ ಸಸ್ಯಗಳು ಲಭ್ಯವಿರುವ ಸ್ಥಳ ಮುಂತಾದ ವಿಷಯಗಳ ಮೇಲೆ ಮಾತುಕತೆ ಇರುತ್ತದೆ.

ಪ್ರತಿ ಮಂಗಳವಾರ 2:35 ರಿಂದ 3: 05 ರವರೆಗೂ ಬಿತ್ತರಗೊಳ್ಳುವ ಈ ಕಾರ್ಯಕ್ರಮದಲ್ಲಿ ಸಸ್ಯ ಶಾಸ್ತ್ರ ದ ವಿಶೇಷ ತಜ್ಞರು, ಆಯುರ್ವೇದ ವೈದ್ಯರುಗಳು ಶೋತ್ರುಗಳ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ ಹಾಗೂ ಔಷಧೀಯ ಸಸ್ಯಗಳಿಂದ ಯಾವ ಯಾವ ಕಾಯಿಲೆಗಳನ್ನು ದೂರಾಗಿಸಬಹುದು ಎನ್ನುವುದನ್ನು ವಿವರಿಸಲಿದ್ದಾರೆ. ಕೇಳುಗರು ತಮ್ಮ ಪ್ರಶ್ನೆಗಳನ್ನು ನಿಲಯದ ನಿರ್ದೇಶಕರು, ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಕಳಿಸಬಹುದು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X