ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಮಾಭಾರತಿ ಸ್ವಾಗತಕ್ಕೆ ಬಿಜೆಪಿ ರೆಡಿ : ಬಾಲುಲಾಲ್‌ ಗೌರ್‌

By Staff
|
Google Oneindia Kannada News

ಬೆಂಗಳೂರು : ಉಮಾಭಾರತಿ ಮತ್ತೆ ಬಿಜೆಪಿಗೆ ಬರಲಿಚ್ಛಿಸಿದರೆ ಅವರಿಗೆ ಸ್ವಾಗತವಿದೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಬಾಲುಲಾಲ್‌ ಗೌರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ ಗೌರ್‌, ಪಕ್ಷದಿಂದ ಉಚ್ಚಾಟನೆಗೊಂಡಿರುವ ಉಮಾಭಾರತಿಯವರನ್ನು ವಾಪಸು ಕರೆತರುವುದು ಸರಿಯೆಂದು ಪಕ್ಷದ ಕೇಂದ್ರೀಯ ನಾಯಕರು ನಿರ್ಧರಿಸಿದರೆ, ಅಂತಹ ನಿರ್ಧಾರಕ್ಕೆ ನನ್ನ ಬೆಂಬಲವಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಅವರನ್ನು ನಾನು ಸ್ವಾಗತಿಸುತ್ತೇನೆ. ತಮ್ಮದೇ ಆದ ಅಹಂನ ಕಾರಣಗಳಿಗಾಗಿ ಅವರು ಪಕ್ಷವನ್ನು ತ್ಯಜಿಸಿದ್ದರು ಎಂದು ಅಭಿಪ್ರಾಯಪಟ್ಟರು.

ಫೈರ್‌ ಬ್ರ್ಯಾಂಡ್‌ ಪರ ಅಡ್ವಾಣಿ ...?: ಹಿಂದುತ್ವದಲ್ಲಿ ನಂಬಿಕೆಯಿರುವ ಎಲ್ಲ ಮಾಜಿ ಬಿಜೆಪಿ ನಾಯಕರು ಮತ್ತೆ ಒಂದಾಗಬೇಕು ಎಂದು ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಎಲ್‌.ಕೆ.ಅಡ್ವಾಣಿ ಹೇಳಿದ್ದರು. ಆ ಮೂಲಕ ಫೈರ್‌ ಬ್ರ್ಯಾಂಡ್‌ ಉಮಾಭಾರತಿ ಅವರನ್ನು ಮತ್ತೆ ಕರೆತರುವ ಮುನ್ಸೂಚನೆ ನೀಡಿದ್ದರು ಎಂದು ಮೂಲಗಳು ಹೇಳಿವೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X