ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್‌ : ನಾಯಕನಾಗಿ ರಾಹುಲ್‌ ದ್ರಾವಿಡ್‌ ಮುಂದುವರಿಕೆ

By Staff
|
Google Oneindia Kannada News

ಮುಂಬಯಿ : ಮುಂಬರುವ ಬಾಂಗ್ಲಾದೇಶ ಪ್ರವಾಸಕ್ಕೆ ಭಾರತ ಕ್ರಿಕೆಟ್‌ ತಂಡದ ನಾಯಕನಾಗಿ ರಾಹುಲ್‌ ದ್ರಾವಿಡ್‌ ಅವರನ್ನು ಮುಂದುವರಿಸಲಾಗಿದೆ.

ಶನಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಸಭೆ ಈ ತೀರ್ಮಾನ ಕೈಗೊಂಡಿತು. ರವಿಶಾಸ್ತ್ರಿ ತಂಡದ ವ್ಯವಸ್ಥಾಪಕರಾಗಿ, ರಾಬಿನ್‌ಸಿಂಗ್‌ ಫೀಲ್ಡಿಂಗ್‌ ಕೋಚ್‌ ಹಾಗೂ ವೆಂಕಟೇಶ್‌ಪ್ರಸಾದ್‌ ಬೌಲಿಂಗ್‌ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಕಾರಣ, ಸಚಿನ್‌ ತೆಂಡೂಲ್ಕರ್‌ ಹಾಗೂ ಯುವರಾಜ್‌ಸಿಂಗ್‌ ಅವರಿಗೆ ಮಂಡಳಿ ನೋಟೀಸ್‌ ಜಾರಿಮಾಡಿದೆ.

ಆಟಗಾರರ ಆದಾಯ ಕಡಿತ : ವಿಶ್ವಕಪ್‌ನಲ್ಲಿ ತಂಡ ವಿಫಲಗೊಂಡ ಹಿನ್ನೆಲೆಯಲ್ಲಿ ಆಟಗಾರರ ಗುತ್ತಿಗೆ ಪದ್ಧತಿಯನ್ನು ಕೈಬಿಡಲಾಗಿದ್ದು, ಮ್ಯಾಚ್‌ ಪೇಮೆಂಟ್‌ಗೆ ಮರಳಲಾಗಿದೆ.

ಪ್ರತಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ನೀಡಲಾಗುತ್ತಿದ್ದ 1.6ಲಕ್ಷ ರೂಪಾಯಿ ಸಂಭಾವನೆಯನ್ನು 1ಲಕ್ಷ ರೂಪಾಯಿಗೆ ಕಡಿತಗೊಳಿಸಲಾಗಿದೆ. ಸರಣಿಯಾಂದನ್ನು ಗೆದ್ದರೆ ಪ್ರತಿ ಆಟಗಾರ 3ಲಕ್ಷ ರೂಪಾಯಿ ಬೋನಸ್‌ ಪಡೆಯಲಿದ್ದಾನೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X