ಹೈಕೋರ್ಟ್ಗೆ ಕೈಮುಗಿದ ವಿನಿವಿಂಕ್ ಶಾಸ್ತ್ರಿಯ ನವ ರಾಗ!
ಬೆಂಗಳೂರು : ‘ಸತ್ಯವೇ ನಮ್ಮ ತಾಯಿ ತಂದೆ.. ಸತ್ಯವೇ ನಮ್ಮ ಬಂಧು ಬಳಗ.. ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು.. ’ಎನ್ನುವ ಪುಣ್ಯಕೋಟಿ ಗೋವಿನಂತೆ, ಕೋಟ್ಯಂತರ ರೂ.ವಂಚನೆಯೆಸಗಿದ ಆರೋಪಿ ವಿನಿವಿಂಕ್ ಶಾಸ್ತ್ರಿ ವರ್ತಿಸುತ್ತಿದ್ದಾರೆ!
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿರುವ ಅವರು, ನನಗೆ ಜಾಮೀನು ನೀಡಿದರೆ ಎಲ್ಲರ ಹಣವನ್ನೂ ವಾಪಸ್ ಕೊಡುತ್ತೇನೆ. ಪ್ಲೀಸ್ ನನ್ನನ್ನು ನಂಬಿ... ಯಾರಿಗೂ ಮೋಸ ಮಾಡುವ ಉದ್ದೇಶ ನನ್ನಲ್ಲಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.
ಲೋಕ್ ಅದಾಲತ್ಗೆ ನನ್ನ ಪ್ರಕರಣವನ್ನು ವಹಿಸಿದರೆ ಒಳ್ಳೆಯದು. ಪರಸ್ಪರ ಮಾತುಕತೆ ಮೂಲಕ, ಹಣಕಾಸು ವ್ಯವಹಾರವನ್ನು ಇತ್ಯರ್ಥ ಪಡಿಸಿಕೊಳ್ಳುತ್ತೇನೆ. ಠೇವಣಿದಾರರಿಗೆ ನಾನು ನೀಡಬೇಕಾಗಿರುವ 4ಕೋಟಿ ರೂಪಾಯಿಗಳನ್ನು ವಾಪಸ್ ಮಾಡುತ್ತೇನೆ. ನನಗೆ ಕೂಡಲೇ ಜಾಮೀನು ನೀಡಿ ಎಂದು ವಿನಿವಿಂಕ್ ಶಾಸ್ತ್ರೀ ಕೋರಿದ್ದಾರೆ.
500ಕೋಟಿಗೂ ಅಧಿಕ ಹಣವನ್ನು ನುಂಗಿ ನೀರು ಕುಡಿದ ಆರೋಪ ವಿನಿವಿಂಕ್ ಶಾಸ್ತ್ರೀ ಅರ್ಥಾತ್ ಶ್ರೀನಿವಾಸ ಶಾಸ್ತ್ರಿ ಮೇಲಿದೆ. ವಂಚನೆ ನಂತರ ತಲೆಮರೆಸಿಕೊಂಡಿದ್ದ ಶಾಸ್ತ್ರೀಯನ್ನು 2005ರಲ್ಲಿ ಬಂಧಿಸಲಾಗಿತ್ತು. ಈ ಸಂಗತಿ ನಿಮಗೂ ಗೊತ್ತು.
(ದಟ್ಸ್ ಕನ್ನಡ ವಾರ್ತೆ)