ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಂದ ಸಚಿನ್‌ ಸಂದರ್ಶನದಲ್ಲಿ ಏನ್‌ ಹೇಳಿದ್ದಾರೆ ಗೊತ್ತೆ?

By Staff
|
Google Oneindia Kannada News

I have never felt so bad in my entire career, says Sachinನಾಗಪುರ : ಭಾರತ ಕ್ರಿಕೆಟ್‌ ತಂಡದ ತರಬೇತುದಾರ ಗ್ರೆಗ್‌ ಚಾಪೆಲ್‌ ಹಿರಿಯ ಆಟಗಾರರ ಮನೋಭಾವ ಪ್ರಶ್ನಿಸಿರುವುದಕ್ಕೆ ಸಚಿನ್‌ ತೆಂಡೂಲ್ಕರ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ವಿಶ್ವಕಪ್‌ನಲ್ಲಿ ನಮ್ಮ ಸೋಲು ಹಾಗೂ ನಿರ್ಗಮನದ ಕುರಿತು ಜಗತ್ತೇ ಮಾತನಾಡುತ್ತಿದೆ. ಆದರೆ ಯಾರೊಬ್ಬರಾದರೂ ನಮಗೇನನಿಸುತ್ತಿದೆ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರಾ...? ಎಂದು ಪತ್ರಿಕೆಯಾಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಅಲವತ್ತುಕೊಂಡಿದ್ದಾರೆ.

ಸಂದರ್ಶನದ ಸಾರ ಸಂಗ್ರಹ :

  • ನಾನು ಅಸಹಾಯಕನೆನಿಸುತ್ತಿದೆ, ಶಬ್ದಗಳಲ್ಲಿ ಹೇಳಲಾಗದಷ್ಟು ನೊಂದಿದ್ದೇನೆ. ನನ್ನ ಇಡೀ ಕ್ರಿಕೆಟ್‌ ಜೀವನದಲ್ಲಿ ಇಷ್ಟೊಂದು ನೋವಾಗಿರಲಿಲ್ಲ.
  • ಎಷ್ಟು ಟೆಸ್ಟ್‌ ಹಾಗೂ ಒಂದು ದಿನದ ಸರಣಿಗಳನ್ನು ಗೆದ್ದರೂ ಅವುಗಳು ವಿಶ್ವಕಪ್‌ ವಿಜಯಕ್ಕೆ ಸಮವಾಗಲಾರವು. ವಿಶ್ವಕಪ್‌ ನಮ್ಮ ಒಟ್ಟು ಗುರಿ, ಕನಸು, ಮೋಹ ಎಲ್ಲವೂ ಆಗಿತ್ತು. ಈಗ ಅದೆಲ್ಲ ಭಗ್ನಗೊಂಡಿದೆ. ಇದಕ್ಕಾಗಿ ನಾವೆಲ್ಲ ತುಂಬಾ ನೊಂದಿದ್ದೇವೆ.
  • ನಮ್ಮನ್ನು ನಾವು ಸಮರ್ಥಿಸಿಕೊಳ್ಳುತ್ತಿದ್ದೇವೆ ಎಂದಲ್ಲ. ನಾವು ಕೆಟ್ಟ ಆಟ ಆಡಿದೆವು ಎಂಬ ಅರಿವಿದೆ. ತಂಡವಾಗಿ ಸೋಲಿನ ಹೊಣೆ ಹೊರುತ್ತೇವೆ. ಆದರೆ ತುಂಬಾ ನೋವು ತಂದ ವಿಚಾರವೆಂದರೆ, ತರಬೇತುದಾರ ಚಾಪೆಲ್‌ ನಮ್ಮ ಮನೋಭಾವ ಪ್ರಶ್ನಿಸಿರುವುದು.
  • 17ವರ್ಷಗಳಿಂದ ನನ್ನ ಹೃದಯ ಹಾಗೂ ಆತ್ಮವನ್ನು ಕ್ರಿಕೆಟ್‌ಗೆ ಅರ್ಪಿಸಿಕೊಂಡಿದ್ದೇನೆ. ನನ್ನ ಮನೋಭಾವ ಸರಿಯಿಲ್ಲ ಎಂದು ಯಾವುದೇ ತರಬೇತುದಾರರು ಈ ಮೊದಲು ಹೇಳಿಲ್ಲ.
  • ಇಲ್ಲಿಯವರೆಗೂ ಕ್ರಿಕೆಟ್‌ ನನ್ನ ಜೀವನವಾಗಿದೆ, ಮುಂದೆಯೂ ಜೀವನವೇ ಆಗಿರುತ್ತದೆ.
ಶುಕ್ರವಾರ(ಏಪ್ರಿಲ್‌ 5)ದಿಂದ ಆರಂಭವಾಗಲಿರುವ ಎರಡು ದಿನಗಳ ಬಿಸಿಸಿಐ ಸಭೆ, ಹಲವು ಹಿರಿಯ ಆಟಗಾರರು ಹಾಗೂ ತರಬೇತುದಾರ ಚಾಪೆಲ್‌ರ ಭವಿಷ್ಯದ ಕುರಿತು ನಿರ್ಧರಿಸಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಸುನೀಲ್‌ ಗವಾಸ್ಕರ್‌, ರವಿ ಶಾಸ್ತ್ರಿ, ಎಸ್‌.ವೆಂಕಟರಾಘವನ್‌ ಸೇರಿದಂತೆ ಏಳು ಜನ ಭಾರತ ತಂಡದ ಮಾಜಿ ನಾಯಕರುಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಹಾಲಿ ನಾಯಕ ರಾಹುಲ್‌ ದ್ರಾವಿಡ್‌, ಮುಖ್ಯ ಆಯ್ಕೆಗಾರ ದಿಲೀಪ್‌ ವೆಂಗ್‌ಸರ್ಕಾರ್‌, ತರಬೇತುದಾರ ಗ್ರೆಗ್‌ ಚಾಪೆಲ್‌, ವೆಸ್ಟ್‌ಇಂಡೀಸ್‌ ಪ್ರವಾಸದಲ್ಲಿ ತಂಡದ ವ್ಯವಸ್ಥಾಪಕರಾಗಿದ್ದ ಸಂಜಯ್‌ ಜಗದಾಳೆ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X