ಹರಿಯಾಣ : ಕಪಿಲ್ದೇವ್ ತವರಿನಲ್ಲಿ ಕ್ರಿಕೆಟ್ಗೆ ಬಹಿಷ್ಕಾರ
ಜಿಂದ್(ಹರಿಯಾಣ) : ವಿಶ್ವಕಪ್ ಕ್ರಿಕೆಟ್ ಅಂಗಳದಿಂದ ಹೊರಬಿದ್ದ ಟೀಮ್ ಇಂಡಿಯಾ, ಬೈಗುಳಗಳನ್ನು ಸ್ವೀಕರಿಸುತ್ತಲೇ ಇದೆ. ಇತ್ತ ಹರಿಯಾಣದ 28 ಗ್ರಾಮಗಳಲ್ಲಿ ಕ್ರಿಕೆಟ್ ಆಟಕ್ಕೆ ಬಹಿಷ್ಕಾರ ಹಾಕಲಾಗಿದೆ.
ಕ್ರಿಕೆಟ್ ಅರ್ಥವಿಲ್ಲದ ಆಟ. ಇದರಿಂದ ಸಮಯಹಾಳು ಬಿಟ್ಟರೇ ಬೇರೆ ಪ್ರಯೋಜನವಿಲ್ಲ ಎನ್ನುವುದು ಈ ಗ್ರಾಮಸ್ಥರ ಅಭಿಪ್ರಾಯ. 28ಗ್ರಾಮಗಳ ಪಂಚಾಯಿತಿ ಮುಖಂಡರು ಸಭೆ ಸೇರಿ, ಕ್ರಿಕೆಟ್ ಬಹಿಷ್ಕಾರ ನಿರ್ಧಾರವನ್ನು ಕೈಗೊಂಡಿದ್ದಾರೆ.
ಜಿಂದ್ ಜಿಲ್ಲೆಯ 28 ಗ್ರಾಮಗಳಲ್ಲಿ ಈಗ ಕ್ರಿಕೆಟ್ ಮಾಯ. ಮನೆಗಳಲ್ಲಿನ ಗೋಡೆ ಮೇಲಿಂದ ಸಚಿನ್, ವೀರೇಂದ್ರ ಸೆಹ್ವಾಗ್ ಮತ್ತು ದೋನಿ ಚಿತ್ರಗಳು ಎಂದೋ ಮಾಯ.
ಕ್ರಿಕೆಟ್ ಕ್ರೇಜ್ನಿಂದ ಈಗ ನಮ್ಮ ಯುವಕರು ಮತ್ತು ಮಕ್ಕಳು ಹೊರ ಬಂದಿದ್ದಾರೆ. ಇನ್ನೆಂದೂ ಕ್ರಿಕೆಟ್ ನೋಡುವುದಿಲ್ಲ ಮತ್ತು ಮುಟ್ಟುವುದಿಲ್ಲವೆಂದು ಪ್ರಮಾಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಸಂತಸದಿಂದ ಹೇಳಿದ್ದಾರೆ.
ನಮ್ಮ ಹಿರಿಯರು ನಾವು ಕ್ರಿಕೆಟ್ ಆಡುವುದನ್ನು ಬಯಸುವುದಿಲ್ಲ. ನಮಗೂ ಮೊದಲಿನ ಕ್ರಿಕೆಟ್ ಹುಚ್ಚು ಈಗ ಉಳಿದಿಲ್ಲ. ಇನ್ಮುಂದೆ ಸಾಂಪ್ರದಾಯಿಕ ಆಟಗಳಾದ ಕಬಡ್ಡಿ, ವಾಲಿಬಾಲ್, ಫುಟ್ಬಾಲ್ ಮತ್ತಿತರ ಆಟಗಳನ್ನು ಆಡುತ್ತೇವೆ ಎಂದು ಜಿಂದ್ನ ಯುವಕ ರಮೇಶ್ ಕುಮಾರ್ ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ರಂಗದ ದಿಗ್ಗಜ ಕಪಿಲ್ದೇವ್ರನ್ನು ಕಾಣಿಕೆಯಾಗಿ ನೀಡಿದ ಹರಿಯಾಣದಲ್ಲಿಯೇ, ಈಗ ಬಹಿಷ್ಕಾರದ ಕಾನೂನು. 1983ರಲ್ಲಿ ಕಪಿಲ್ ನೇತೃತ್ವದಲ್ಲಿ ಟೀಮ್ ಇಂಡಿಯಾ, ವಿಶ್ವಕಪ್ ಪಡೆದಿತ್ತು.
(ಏಜನ್ಸೀಸ್)