ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಲಾಟರಿ ಆಯಿತು, ಸದ್ಯದಲ್ಲೇ ಕುದುರೆ ರೇಸ್ಗೆ ಕಡಿವಾಣ’
ಬೆಂಗಳೂರು : ಎಲ್ಲಾ ರೀತಿಯ ಲಾಟರಿ ನಿರ್ಬಂಧಿಸಿದ ರಾಜ್ಯ ಸರ್ಕಾರ, ಈಗ ಕುದುರೆ ರೇಸ್ ನಿಷೇಧದತ್ತ ಚಿಂತನೆ ನಡೆಸಿದೆ.
ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ಬುಧವಾರ ಮಾತನಾಡಿದ ಲಾಟರಿ ಸಚಿವ ರಾಮಚಂದ್ರ ಗೌಡ, ಮುಂದಿನ ದಿನಗಳಲ್ಲಿ ಕುದುರೆ ರೇಸ್ಗೆ ಸರ್ಕಾರ ಕಡಿವಾಣ ಹಾಕಲಿದೆ ಎಂದು ಸ್ಪಷ್ಪಪಡಿಸಿದರು.
ಆನ್ಲೈನ್, ಪೇಪರ್ ಸೇರಿದಂತೆ ಎಲ್ಲಾ ರೀತಿಯ ಲಾಟರಿ ನಿಷೇಧಿಸಿ, ವಾರ್ಷಿಕ 250ಕೋಟಿ ರೂ. ನಷ್ಟವನ್ನು ಸರ್ಕಾರ ಅನುಭವಿಸುತ್ತಿದೆ. ಆದರೂ ನಮಗೆ ಜನರ ಹಿತವೇ ಮುಖ್ಯ. ಹೀಗಾಗಿ ಎಂತಹ ಪರಿಸ್ಥಿತಿ ಎದುರಿಸಲೂ ಸರ್ಕಾರ ಸಿದ್ಧವಿದೆ ಎಂದು ರಾಮಚಂದ್ರಗೌಡ ಹೇಳಿದರು.
(ಯುಎನ್ಐ)
Story first published: Wednesday, April 4, 2007, 5:30 [IST]