ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಾಲೆಗೆ ನಪಾಸಿನ ಬೆದರಿಕೆಯಾಡ್ಡಿ ರೇಪ್ ಮಾಡಿದ ಗುರು!
ಹರಪನಹಳ್ಳಿ : 13ವರ್ಷದ ವಿದ್ಯಾರ್ಥಿನಿಯೋರ್ವಳ ಮೇಲೆ ಶಿಕ್ಷಕನೇ ಅತ್ಯಾಚಾರವೆಸಗಿರುವ ಘಟನೆ, ತಾಲ್ಲೂಕಿನ ಮಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ ಎಂಬ ಶಿಕ್ಷಕ ಈ ಆರೋಪಕ್ಕೊಳಗಾಗಿರುವ ವ್ಯಕ್ತಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿರುವ ಈತ, 7ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೋರ್ವಳಿಗೆ ತನ್ನ ಲೈಂಗಿಕ ದಾಹ ತೀರಿಸದಿದ್ದರೆ ನಪಾಸು ಮಾಡುವುದಾಗಿ ಗದರಿಸಿದ್ದಾನೆ. ಆನಂತರ ಮೂರುಬಾರಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.
ಈ ವಿಷಯ ಬಹಿರಂಗಪಡಿಸಿದರೆ ಭಾರೀ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದೂ ಶಿಕ್ಷಕ, ವಿದ್ಯಾರ್ಥಿನಿಗೆ ಬೆದರಿಕೆ ಒಡ್ಡಿದ್ದ. ಭಯಗೊಂಡ ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಪಾಲಕರು ರಕ್ಷಿಸಿದರು. ಶಿಕ್ಷಕ ಈಗ ತಲೆಮರೆಸಿಕೊಂಡಿದ್ದಾನೆ ಎಂದು ಮೂಲಗಳು ಹೇಳಿವೆ.
ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ ಎಂಬ ತತ್ವಜ್ಞಾನಕ್ಕೆ ಜನ್ಮ ನೀಡಿದ ಭಾರತೀಯ ನೆಲದಲ್ಲಿ, ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿರುವುದು ಆಘಾತಕಾರಿ ಸಂಗತಿ.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, April 2, 2007, 5:30 [IST]