ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರು ಜಿಲ್ಲೆ ಬಂದ್ಗೆ ಸಿದ್ದರಾಮಯಯ್ಯ ಕರೆ
ಮೈಸೂರು : ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮೈಸೂರು ಬಂದ್ಗೆ ಕರೆ ಕೊಟ್ಟಿದ್ದಾರೆ. ಶನಿವಾರ (ಮಾ.31) ಇಲ್ಲಿನ ಜಯಪುರದಲ್ಲಿ ನಡೆದ ಗಲಭೆ ಹಾಗೂ ಕಾರ್ಯಕರ್ತ ಬಂಧನವನ್ನು ಖಂಡಿಸಿ ಈ ಕರೆ ನೀಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರನ್ನು ಹಾಗೂ ನನ್ನನ್ನು, ಸರ್ಕಾರ ಸುಮ್ಮನೆ ಬಂಧಿಸಿ ಎರಡು ಬಣಗಳ ನಡುವೆ ಘರ್ಷಣೆಗೆ ಕಾರಣವಾಗಿದೆ. ಸರ್ಕಾರದ ಕ್ರಮವನ್ನು ಖಂಡಿಸಿ ಮೈಸೂರು ಬಂದ್ಗೆ ಕರೆ ಕೊಟ್ಟಿರುವುದಾಗಿ ಸಿದ್ದರಾಮಯ್ಯ ಸುದ್ದಿಗಾರರಿಗೆ ಹೇಳಿದರು.ಪೊಲೀಸರು ಗೂಂಡಾಗಿರಿ ಮಾಡಿದರು, ಬಂಧನ ಎಂಬ ನಾಟಕ ಆಡಿದರು ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
ಇದಕ್ಕೂ ಮೊದಲು ಕಾಂಗ್ರೆಸ್ ಕಾರ್ಯಕರ್ತರು ಜಯಪುರ ಹಾಗೂ ಸಮೀಪದ ಪ್ರದೇಶದಲ್ಲಿದ್ದ ಕೆಎಸ್ಆರ್ಟಿಸಿ ಬಸ್ಗಳನ್ನು ಜಖಂಗೊಳಿಸಿ ಅಗ್ನಿ ಸ್ಪರ್ಶ ಮಾಡಿ, ದಾಂಧಲೆ ಎಬ್ಬಿಸಿದರು. ಹೆಗ್ಗಡದೇವನಕೋಟೆಯಲ್ಲಿ ಇನ್ನೊಂದು ಗುಂಪು ರಸ್ತೆ ತಡೆ ನಡೆಸಿತ್ತು.
(ದಟ್ಸ್ ಕನ್ನಡವಾರ್ತೆ)
Comments
Story first published: Sunday, April 1, 2007, 5:30 [IST]