ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕರ್ನಾಟಕ ರತ್ನ ’ಸಿದ್ಧಗಂಗಾ ಶ್ರೀಗಳಿಗೆ ಜನ್ಮ ದಿನದ ಕಾಣಿಕೆ

By Staff
|
Google Oneindia Kannada News

Siddaganga seer to get Karnataka rathna award as a birthday giftಬೆಂಗಳೂರು: ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ರಾಜ್ಯ ಸರ್ಕಾರ ಇಂದು ಸಂಜೆ 6 ಕ್ಕೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಿದೆ. ಏಪ್ರಿಲ್‌ 1ಕ್ಕೆ 100 ವಸಂತಗಳನ್ನು ಪೂರೈಸಿದ ಸ್ವಾಮೀಜಿಯವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಜನ್ಮದಿನದ ಕಾಣಿಕೆ ರೂಪದಲ್ಲಿ ಸಿಕ್ಕಂತಾಗುತ್ತದೆ.

ವಿಧಾನ ಸೌಧದ ಮುಂಭಾಗದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಹೆಚ್‌.ಡಿ .ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ತ್ರಿವಿಧ ದಾಸೋಹಿ ಕಿರು ಹೊತ್ತಿಗೆಯನ್ನು ಉಪ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅನಾವರಣಗೊಳಿಸಲಿದ್ದಾರೆ. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್‌ನ ಸಭಾಪತಿ ಸಚ್ಚಿದಾನಂದ ಖೋತ, ವಿಧಾನಸಭಾಧ್ಯಕ್ಷ ಕೃಷ್ಣ, ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಧರ್ಮ ಸಿಂಗ್‌, ವಿರೋಧಪಕ್ಷದ ನಾಯಕ ಎಚ್‌. ಕೆ. ಪಾಟೀಲ ಆಗಮಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಹೆಚ್‌. ಎಸ್‌. ಮಹದೇವ್‌ ಪ್ರಸಾದ್‌ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ವಚನ ಗಾಯನ:
ಖ್ಯಾತ ಗಾಯಕ ಪಂಡಿತ ಗಣಪತಿ ಭಟ್‌ ಹಾಸಣಗಿ , ವೆಂಕಟೇಶ ಕುಮಾರ, ಕಸ್ತೂರಿ ಶಂಕರ್‌ ಅವರಿಂದ ವಚನ ಗಾಯನ ಹಾಗೂ ಜಿ.ಪಿ. ಜಗದೀಶ್‌ ಅವರ ತಂಡದಿಂದ ವೀರಗಾಸೆ ಕುಣಿತವಿರುತ್ತದೆ.

ನೇರ ಪ್ರಸಾರ:
ದೂರದರ್ಶನದ ಚಂದನ, ಟಿವಿ 9 ಹಾಗೂ ಉದಯ ಟಿವಿ ವಾಹಿನಿಗಳು ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲಿದೆ. ಇದಲ್ಲದೆ ಜಯನಗರ, ಕೇಂದ್ರ ಬಸ್‌ ನಿಲ್ದಾಣ(ಮೆಜೆಸ್ಟಿಕ್‌), ಬಸವೇಶ್ವರ ನಗರಗಳಲ್ಲಿ ಬೃಹತ್‌ ಟಿವಿ ಪರದೆಗಳ ಮೂಲಕ ವೀಕ್ಷಿಸಬಹುದು.

ಸಿದ್ದಗಂಗಾ ಶ್ರೀಗಳಿಗೆ ನಿಮ್ಮ ಶುಭಾಶಯವನ್ನು ತಿಳಿಸಿ

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X