ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಮಿಳುನಾಡು ಬಂದ್: ಕರ್ನಾಟಕದ ಬಸ್ಸು-ರೈಲಿಗೆ ರಜೆ!
ಬೆಂಗಳೂರು : ಒಬಿಸಿ ಮೀಸಲು ನೀತಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದನ್ನು ವಿರೋಧಿಸಿ, ತಮಿಳು ನಾಡಿನಲ್ಲಿ ಶನಿವಾರ ಬಂದ್ ನಡೆಯುತ್ತಿದೆ.
ಡಿಎಂಕೆ ಕರೆ ನೀಡಿರುವ ಬಂದ್ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ತೆರಳುವ ಕೆಎಸ್ಆರ್ಟಿಸಿ ಬಸ್ ಸಂಚಾರವನ್ನು ಶನಿವಾರ ಬೆಳಗ್ಗೆಯಿಂದಲೇ ರದ್ದು ಪಡಿಸಲಾಗಿದೆ. ಜೊತೆಗೆ ತಮಿಳುನಾಡಿಗೆ ತೆರಳುವ ಎಂಟು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಬಂದ್ ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಾಯ ಉಂಟಾಗಿದೆ. ಈ ಮಧ್ಯೆ ಕೆಲವು ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ವಿಮಾನ ಸಂಚಾರ ಎಂದಿನಂತೆ ಮುಂದುವರೆದಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, March 31, 2007, 5:30 [IST]