ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಡುಪಿ ಅಭಿವೃದ್ಧಿಗೆ ಶ್ರೀಗಳ 8 ಅಂಶದ ಕಾರ್ಯಕ್ರಮ
ಉಡುಪಿ : ಶ್ರೀಕೃಷ್ಣನ ಸನ್ನಿಧಿಯಾದ ಉಡುಪಿ ನಗರವನ್ನು ಶುಭ್ರ, ಸುಂದರ ಮತ್ತು ಆಕರ್ಷಣೀಯಗೊಳಿಸಲು ಎಂಟು ಅಂಶಗಳ ಕಾರ್ಯಕ್ರಮವನ್ನು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಿದ್ಧಪಡಿಸಿದ್ದಾರೆ.
ಮುಂದಿನ ಎರಡು ವರ್ಷಗಳ ಅವಧಿಗೆ ಪರ್ಯಾಯ ಪೀಠದ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಶ್ರೀಗಳು, ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದರು.
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗೀತ ಮಂದಿರದಲ್ಲಿ ವಿಶ್ವರೂಪ ದರ್ಶನದ ವ್ಯವಸ್ಥೆ ಮಾಡುತ್ತೇವೆ. ಈ ಸಂಬಂಧ ತಜ್ಞರೊಂದಿಗೆ ಚರ್ಚೆ ನಡೆಸಿದ್ದೇವೆ. ಸಾಮೂಹಿಕ ಭಗವದ್ಗೀತೆ ಪಠಣ ಮತ್ತು ದೇವಸ್ಥಾನದ ಸುತ್ತಮುತ್ತ ಶುಭ್ರತಾ ಕಾರ್ಯ ಕ್ಕೆ ಒತ್ತು ಕೊಡುತ್ತೇವೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಇನ್ನಷ್ಟು ನಡೆಸಲು, ವಿಶ್ವ ಧಾರ್ಮಿಕ ಸಮ್ಮೇಳನವನ್ನು ಉಡುಪಿಯಲ್ಲಿ ನಡೆಸಲು ಚಿಂತನೆ ನಡೆಸಿದ್ದೇವೆ ಎಂದು ಶ್ರೀಗಳು ಹೇಳಿದ್ದಾರೆ.
(ಯುಎನ್ಐ)
Comments
Story first published: Monday, March 26, 2007, 5:30 [IST]